ಬ್ರಹ್ಮಾವರ: ಮಳೆಯಿಂದ ಮನೆಗಳಿಗೆ ಹಾನಿ

Update: 2021-05-12 14:20 GMT

ಉಡುಪಿ, ಮೇ12: ಮಂಗಳವಾರ ಸಂಜೆ ಬೀಸಿದ ಗಾಳಿ ಹಾಗೂ ಮಳೆಯಿಂದಾಗಿ ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ ವಿಠಲ ನಾಯ್ಕ್, ಮೋಹನ ನಾಯ್ಕ್ ಹಾಗೂ ಶ್ಯಾಮ ನಾಯ್ಕ್ ಎಂಬವರ ವಾಸ್ತವ್ಯದ ಮನೆಗಳಿಗೆ ಭಾಗಶ: ಹಾನಿಯಾಗಿದ್ದು, ಒಟ್ಟು ಸುಮಾರು 50ಸಾವಿರ ರೂ.ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಜಿಲ್ಲೆಯ ಕಾಪುವಲ್ಲಿ14ಮಿ.ಮೀ., ಉಡುಪಿಯಲ್ಲಿ 8.00 ಮಿ.ಮೀ., ಕಾರ್ಕಳದಲ್ಲಿ 7.00 ಹಾಗೂ ಹೆಬ್ರಿಯಲ್ಲಿ 5.00ಮಿ.ಮೀ. ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News