×
Ad

ತಮಿಳುನಾಡು: ಬಾಯ್ಲರ್ ಸ್ಫೋಟ, ನಾಲ್ವರು ಮೃತ್ಯು, 20 ಜನರಿಗೆ ಗಾಯ

Update: 2021-05-13 16:03 IST
ಸಾಂದರ್ಭಿಕ ಚಿತ್ರ

ಚೆನ್ನೈ: ತಮಿಳುನಾಡಿನ ಕಡಲೂರಿನ ಸಿಪ್ಕಾಟ್ ಇಂಡಸ್ಟ್ರಿಯಲ್ ಎಸ್ಟೇ ಟ್  ನಲ್ಲಿರುವ  ಕೀಟನಾಶಕ ಉತ್ಪಾದನೆಯ ಕಾರ್ಖಾನೆಯಲ್ಲಿ ಗುರುವಾರ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಹಾಗೂ  20 ಮಂದಿ ಗಾಯಗೊಂಡಿದ್ದಾರೆ.

ಕೀಟನಾಶಕಗಳನ್ನು ತಯಾರಿಸುವ ಕ್ರಿಮ್ಸನ್ ಆರ್ಗಾನಿಕ್ಸ್ ಎಂಬ ಕಂಪನಿಯಲ್ಲಿ ಈ ಅಪಘಾತ ಸಂಭವಿಸಿದೆ.

ಕಂಪನಿಯ ಎರಡನೇ ಮಹಡಿಯಲ್ಲಿರುವ ಬಾಯ್ಲರ್ ಸ್ಫೋಟಗೊಂಡ ನಂತರ ಈ ಅಪಘಾತ ಸಂಭವಿಸಿದೆ. ಬೆಂಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದರೆ,  ಇತರ ಇಬ್ಬರು ಹೊಗೆಯಿಂದ ಉಸಿರುಗಟ್ಟಿ  ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಇತರ 20 ಮಂದಿ ಕೂಡ ತೀವ್ರವಾಗಿ ಗಾಯಗೊಂಡು ಹತ್ತಿರದ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೃತ ಕುಟುಂಬಗಳಿಗೆ ತಲಾ 3 ಲಕ್ಷ ರೂ.ಗಳ ಪರಿಹಾರ  ಘೋಷಿಸಿದ್ದು, ಗಂಭೀರ ಗಾಯಗೊಂಡ 10 ಜನರ ಕುಟುಂಬಗಳಿಗೆ ಒಂದು ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News