ಡಿಕೆಎಸ್‌ಸಿ ಕೇಂದ್ರ ಸಮಿತಿ ಮಾಜಿ ಕಾರ್ಯಧ್ಯಕ್ಷ ಹಾಜಿ ಹಾತೀಂ ಕಂಚಿ ನಿಧನ

Update: 2021-05-13 17:20 GMT

ಕಾಪು, ಮೇ 13: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ಡಿಕೆಎಸ್‌ಸಿ) ಮಂಗಳೂರು ಇದರ ಕೇಂದ್ರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ, ಹಾಲಿ ಸದಸ್ಯ ಹಾಗೂ ಡಿಕೆಎಸ್‌ಸಿ ಸಕ್ರಿಯ ಕಾರ್ಯಕರ್ತರಾದ ಹಾಜಿ ಹಾತೀಂ ಖಾನ್ ಅಬ್ದುಲ್ ಖಾದರ್ (ಹಾತೀಂ ಕಂಚಿ) (58) ಸೌದಿ ಅರೇಬಿಯಾದ ದಮಾಮ್ ನಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದಾರೆ.

ಸೌದಿ ಅರೇಬಿಯಾದ ದಮಾಮ್ ನಲ್ಲಿ ಸ್ವಂತ ಹಜ್ಜ್ ಉಮ್ರಾ ಟೂರಿಸ್ಟ್ ನಡೆಸುತ್ತಿದ್ದ ಅವರು ಕೊಡುಗೈ ದಾನಿಯೂ ಆಗಿದ್ದು, ಸಮುದಾಯದ ಅಭಿವೃದ್ಧಿ ಮತ್ತು ವಿದ್ಯಾಭ್ಯಾಸದ ಕುರಿತು ಅಪಾರ ಕಾಳಜಿ ಹೊಂದಿದ್ದರು.

ಮೃತರು ಸೂರಲ್ಪಾಡಿ ಪ್ರೆಂಡ್ಸ್ ಸಮಿತಿಯ ಮುಖ್ಯ ಸಲಹೆಗಾರರಾಗಿದ್ದು, ಇನ್ನಿತರ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ ಹಾಗೂ ನಾಲ್ಕು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಮ್ರತರ ಅಂತ್ಯಕ್ರಿಯೆ ಶುಕ್ರವಾರ ದಮಾಮ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

ಮೃತರ ವಿಯೋಗವು ಡಿಕೆಎಸ್‌ಸಿಗೆ ಮತ್ತು ಮುಸ್ಲಿಂ ಸಮುದಾಯಕ್ಕೆ ಬಹುದೊಡ್ಡ ನಷ್ಟ ಎಂದು ಡಿಕೆಎಸ್‌ಸಿ ಕೇಂದ್ರ ಸಮಿತಿ ಅಧ್ಯಕ್ಷ ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ರವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸೂರಲ್ಪಾಡಿ ಜುಮಾ ಮಸೀದಿಯ ಗೌರವಾಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ, ಸೂರಲ್ಪಾಡಿ ಫ್ರೆಂಡ್ಸ್ ಅಸೋಸಿಯೇಶನ್ ಸೌದಿ ಅರೇಬಿಯಾ ಇದರ ಉಪಾಧ್ಯಕ್ಷ ಮುಹಮ್ಮದ್ ಶಮೀರ್ ಅಬ್ಬಾಸ್, ಮರ್ಕಝ್ ಆಡಳಿತ ಸಮಿತಿ ಕಾರ್ಯಾಧ್ಯಕ್ಷ ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್, ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಅಸ್ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ, ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮಿಲನ್, ಕೋಶಾಧಿಕಾರಿ ದಾವೂದ್ ಕಜೆಮಾರ್, ಸಂಘಟನಾ ಕಾರ್ಯದರ್ಶಿ ಹಾಜಿ ಅಬ್ದುಲ್ ಹಮೀದ್ ಅರೆಮಿಕ್ಸ್, ಉಪಾಧ್ಯಕ್ಷ ಕೆ.ಎಚ್ ರಫೀಕ್, ಕಾರ್ಯದರ್ಶಿ ಅಬೂಬಕ್ಕರ್ ಬರ್ವ, ಮಾಜಿ ಕಾರ್ಯಾಧ್ಯಕ್ಷ ಹಾಜಿ ಇಸ್ಮಾಯಿಲ್ ಕಿನ್ಯ, ಮಾಜಿ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹಸ್ಸನ್ ಮೂಡುತೋಟ, ಮರ್ಕಝ್ ಆಡಳಿತ ಸಮಿತಿ  ಉಪಾಧ್ಯಕ್ಷ  ಹಾಜಿ ಬದ್ರುದ್ದೀನ್ ಬಜ್ಪೆ, ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ, ಕೋಶಾಧಿಕಾರಿ ಎಮ್.ಎಚ್ ಬಿ ಮುಹಮ್ಮದ್, ಜನರಲ್ ಮ್ಯಾನೇಜರ್ ಯು.ಕೆ ಮುಸ್ತಫಾ ಸಅದಿ, ಡಿಕೆಎಸ್‌ಸಿ ಸಿಲ್ವರ್ ಜ್ಯೂಬಿಲಿ ಸ್ವಾಗತ ಸಮಿತಿಯ ಕನ್ವೀನರ್ ಹಾಜಿ ಹಾತಿಂ ಕೂಳೂರು, ಡಿಕೆಎಸ್‌ಸಿ ಡೆವಲಪ್ಮೆಂಟ್ ಸಮಿತಿಯ ಅಧ್ಯಕ್ಷ ಹುಸೈನ್ ಹಾಜಿ ಕಿನ್ಯ, ಕಾರ್ಯದರ್ಶಿ ಹಾಜಿ ಶಂಸುದ್ದೀನ್ ಬಳ್ಕುಂಜೆ ಮತ್ತು ಕೇಂದ್ರ ಸಮಿತಿ ಹಾಗೂ ಮರ್ಕಝ್ ಆಡಳಿತ ಸಮಿತಿ ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News