ಮೇ 14ರಂದು ಎಸ್ಸೆಸ್ಸೆಪ್ ನಿಂದ ಕೋವಿಡ್19 ಜಾಗೃತಿ ಕಾರ್ಯಕ್ರಮ

Update: 2021-05-13 18:23 GMT

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಕೋವಿಡ್19 ಸಂಭಂದಿಸಿ ಮಾಹಿತಿ, ಮುನ್ನೆಚ್ಚರಿಕೆ ಹಾಗೂ  ಚಿಕಿತ್ಸಾ ಜಾಗೃತಿ ಕಾರ್ಯಕ್ರಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗರವರ ಅಧ್ಯಕ್ಷತೆಯಲ್ಲಿ ಮೇ 14 ಶುಕ್ರವಾರ ಸಂಜೆ 3:00 ಗಂಟೆಗೆ ಝೂಮ್ ನಲ್ಲಿ ಹಾಗೂ ಎಸ್ಸೆಸ್ಸೆಪ್ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಲೈವ್ ನಡೆಯಲಿರುವುದು.

ಇಂಡಿಯಾನ ಆಸ್ಪತ್ರೆ ಮಂಗಳೂರು ಇದರ ನುರಿತ ವೈದ್ಯರಾದ ಡಾ.ಆದಿತ್ಯ ಭಾರದ್ವಾಜ್ ರವರು ಕೋವಿಡ್ ಸಂಭಂದಿಸಿ ಸಂದರ್ಶನ ನೀಡಲಿದ್ದಾರೆ. ಎಸ್ಸೆಸ್ಸೆಪ್ ರಾಜ್ಯ ಕಾರ್ಯದರ್ಶಿ ಎನ್.ಸಿ ರಹೀಂ ಹೊಸ್ಮಾರ್ ಸಂದರ್ಶನ ನಡೆಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News