ಈದುಲ್ ಫಿತ್ರ್ ಪ್ರಯುಕ್ತ ಮುಸ್ಲಿಂ ಜಮಾಅತ್ ಬಂಟ್ವಾಳ 'ಸಹಾಯ್' ತಂಡದಿಂದ ಆಹಾರ ವಿತರಣೆ
ಬಂಟ್ವಾಳ, ಮೇ 14: ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ಸರ್ಕಲ್ 'ಸಹಾಯ್' ತುರ್ತು ಸೇವಾ ತಂಡದ ವತಿಯಿಂದ ಈದುಲ್ ಫಿತ್ರ್ ಪ್ರಯುಕ್ತ ಪೊಲೀಸ್ ಅಧಿಕಾರಿಗಳು ಸೇರಿ ಕೊರೋನ ಯೋಧರಿಗೆ ವಿಶೇಷ ಆಹಾರ ವಿತರಿಸಲಾಯಿತು.
ಬಂಟ್ವಾಳ ಅಸುಪಾಸಿನಲ್ಲಿರುವ ಪ್ರಮುಖ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ವಿಶೇಷ ಆಹಾರವನ್ನು 'ಸಹಾಯ್' ತುರ್ತು ಸೇವಾ ತಂಡ ವಿತರಿಸಿತು.
ಈ ಸಂದರ್ಭ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಅದಿ ಬೆಂಗಳೂರು, ಕೆಸಿಎಫ್ ರಿಯಾದ್ ಘಟಕದ ಹಂಝ ಮೈಂದಾಳ, ತಾಲೂಕು ಕಾರ್ಯದರ್ಶಿಗಳಾದ ಬಶೀರ್ ಹಾಜಿ ಮಿತ್ತಬೈಲ್, ರಶೀದ್ ಹಾಜೀ ವಗ್ಗ, 'ಸಹಾಯ್' ಬಂಟ್ವಾಳ ಸರ್ಕಲ್ ನಾಯಕ ಸೆರ್ಕಳ ಇಬ್ರಾಹಿಂ ಸಖಾಫಿ, ಎಸ್.ವೈ.ಎಸ್ ನಾಯಕ ರಫೀಖ್ ಹಾಜಿ ಕಿಸ್ವ, ಎಸ್ಸೆಸ್ಸೆಫ್ ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಇರ್ಶಾದ್ ಹಾಜಿ ಗೂಡಿನಬಳಿ, ಶರೀಪ್ ನಂದಾವರ, ಹಂಝ ಮಂಚಿ, ಬಂಟ್ವಾಳ ಡಿವಿಷನ್ ಪ್ರಧಾನ ಅಸ್ಲಂ ಸಂಪಿಲ, ಅಮೀರ್ ಬೋಳಂತೂರ್, ಸಿದ್ದೀಖ್ ನಂದಾವರ ತಾಜುಲ್ ಉಲಮಾ ರಿಲೀಫ್ ಸೆಲ್ ವಗ್ಗ ಇದರ ಚೆಯರ್ಮೇನ್ ಮುಹಮ್ಮದ್ ಇಕ್ಬಾಲ್ ವಗ್ಗ ಪಾಲ್ಗೊಂಡಿದ್ದರು.
ಕೋವಿಡ್19 ಸೋಂಕು ಜಗತ್ತನ್ನೇ ತಲ್ಲಣಗೊಳಿಸಿರುವ ಈ ಸಂದರ್ಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ 'ಸಹಾಯ್' ಎಂಬ ತುರ್ತು ಸೇವಾ ತಂಡವನ್ನು ರಚಿಸಿ ರಾಜ್ಯಾದ್ಯಂತ ಅನೇಕ ಜನಪರ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಆ್ಯಂಬುಲೆನ್ಸ್ ಸೇವೆ, ಕೋವಿಡ್ ನಲ್ಲಿ ಮರಣ ಹೊಂದಿದವರಿಗೆ ಅವರವರ ಧರ್ಮಗಳ ವಿಧಿವಿಧಾನ ಅನುಸರಿಸಿ ಅಂತ್ಯಕ್ರಿಯೆ ನಡೆಸಲು ತರಬೇತಿ ಪಡೆದ ಕೋವಿಡ್ ಯೋಧರು, ವಿವಿಧ ಔಷಧೀಯ ಸೇವೆ, ಜನಜಾಗೃತಿ ಶಿಬಿರಗಳು, ಮಾಸ್ಕ್ ವಿತರಣೆ, ರಮಝಾನ್ ತಿಂಗಳಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಇರುವ ವ್ರತದಾರಿಗಳಿಗೆ ಇಫ್ತಾರ್ ಮತ್ತು ಸಹರಿ ವ್ಯವಸ್ಥೆ ಇನ್ನಿತರ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು 'ಸಹಾಯ್' ತುರ್ತು ಸೇವಾ ತಂಡ ನಡೆಸುತ್ತಾ ಬರುತ್ತಿದೆ ಎಂದು ಪ್ರಕಟನೆ ತಿಳಿಸಿದೆ.