ಪ್ರತ್ಯೇಕ ಘಟನೆ: ಇಬ್ಬರು ಆತ್ಮಹತ್ಯೆ

Update: 2021-05-14 16:25 GMT

ಕುಂದಾಪುರ, ಮೇ 14: ತಮ್ಮ ಪತ್ನಿ ಅನಾರೋಗ್ಯದ ಕಾರಣದಿಂದ ಕುಂದಾಪುರದ ತಾಲೂಕು ಆಸ್ಪತ್ರೆಗೆ ದಾಖಲಾದ ವಿಚಾರದಲ್ಲಿ ಮನನೊಂದು ಗೋಪಾಡಿ ಗ್ರಾಮದ ಮೂಡುಗೋಪಾಡಿಯ ನರಸಿಂಹ ಶೆಟ್ಟಿ (73) ಎಂಬವರು ಗುರುವಾರ ಮನೆಯ ಸಮೀಪದ ಗೇರುಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನರಸಿಂಹ ಶೆಟ್ಟಿ ಅವರ ಪತ್ನಿ ಗುಲಾಬಿ ಶೆಟ್ಟಿ ಅನಾರೋಗ್ಯದ ಕಾರಣ ಮೇ 12ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಬೇಜಾರಿನಲ್ಲಿದ್ದ ನರಸಿಂಹ ಶೆಟ್ಟಿ ರಾತ್ರಿ ಊಟ ಮಾಡಿ ಮಲಗಿದವರು ಬೆಳಗ್ಗೆ ನಾಪತ್ತೆಯಾಗಿದ್ದು, ಹುಡುಕಾಡಿದಾಗ ಮನೆಯ ಸಮೀಪದ ಗೇರು ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಯಾವುದೋ ವೈಯಕ್ತಿಕ ಕಾರಣದಿಂದ ಮನನೊಂದ ಯುವತಿ ಯೊಬ್ಬರು ಮನೆಯಲ್ಲಿ ವಿಷಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವಕ್ವಾಡಿ ಗ್ರಾಮದಿಂದ ವರದಿಯಾಗಿದೆ.

ಮೃತ ಯುವತಿಯನ್ನು ಪವಿತ್ರ ಎಂದು ಗುರುತಿಸಲಾಗಿದೆ. ಲೀಲಾವತಿ ಎಂಬವರ ದತ್ತುಪುತ್ರಿಯಾದ ಪವಿತ್ರ ಯಾವುದೋ ಕಾರಣದಿಂದ ಮನನೊಂದು ಮೇ 12ರ ಸಂಜೆ 7ಗಂಟೆಗೆ ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಗುರುವಾರ ಮುಂಜಾನೆ ಮೃತರಾದರು.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News