ಕೆಥೋಲಿಕ್ ಸಭಾದಿಂದ ಆಹಾರ ಸಾಮಗ್ರಿ ವಿತರಣೆ
Update: 2021-05-15 16:24 GMT
ಮಂಗಳೂರು, ಮೇ 15: ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ವತಿಯಿಂದ ಅರ್ಹರಿಗೆ ಆಹಾರ ಸಾಮಗ್ರಿಗಳ ವಿತರಣೆಯು ಶನಿವಾರ ನಗರದ ಕೊಡಿಯಾಲ್ಬೈಲ್ನ ಬಿಷಪ್ ಹೌಸ್ನಲ್ಲಿ ನಡೆಯಿತು.
ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ. ಮ್ಯಾಥ್ಯೂ ವಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಕೆಥೋಲಿಕ್ ಸಭಾ ಸಂಘಟನೆಯು ವಲಯ ಹಾಗೂ ಘಟಕಗಳ ಮೂಲಕ ಧರ್ಮಪ್ರಾಂತ ವ್ಯಾಪ್ತಿಯ 2,000ಕ್ಕೂ ಅಧಿಕ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವ ಗುರಿ ಹೊಂದಿದ್ದು, ಈ ಪೈಕಿ 1,000 ಕುಟುಂಬಗಳಿಗೆ ಶನಿವಾರ ವಿತರಿಸಲಾಯಿತು ಎಂದು ಅಧ್ಯಕ್ಷ ಸ್ಟ್ಯಾನಿ ಲೋಬೊ ಹೇಳಿದರು.
ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ವಲಯ ಅಧ್ಯಕ್ಷರು, ಕಾರ್ಯದರ್ಶಿಗಳ ಸಹಿತ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಅಲ್ಫೋನ್ಸ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.