ಪಡುಬಿದ್ರಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಪ್ರವಹಿಸಿ ವ್ಯಕ್ತಿ ಮೃತ್ಯು

Update: 2021-05-15 17:05 GMT

ಪಡುಬಿದ್ರಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಪ್ರವಹಿಸಿ ಕೃಷಿಕರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಎಲ್ಲೂರಿನಲ್ಲಿ ನಡೆದಿದೆ

ಇಲ್ಲಿನ ಗುರುಗುಂಡಿ ಕುದಿಮಾರು ರಮೇಶ್ ಪೂಜಾರಿ (51) ಮೃತರು. ಕೃಷಿಕರಾಗಿರುವ ಇವರು ಮನೆ ಸಮೀಪದ ತೋಟದಲ್ಲಿ ಕಾಯಿ ಹೆಕ್ಕಲು ತೆರಳಿದ್ದರು. ಈ ವೇಳೆ  ವಿದ್ಯುತ್ ತಂತಿ ತುಂಡಾಗಿ ಬಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಪರಿಸರದಲ್ಲಿ ಹಲವಾರು ಬಾರಿ ತುಂಡಾಗಿ ದುರಸ್ತಿ ಮಾಡಿರುವ ವಿದ್ಯುತ್ ತಂತಿ ಹಾಗೂ ಹಳೆಯದಾದ ವಿದ್ಯುತ್ ಕಂಬದಿಂದ ಅಪಾಯ ವಾಗುತ್ತಿರುವ ಬಗ್ಗೆ ಮೆಸ್ಕಾಂ ಗಮನಕ್ಕೂ ತರಲಾಗಿತ್ತು. ಈ ಬಗ್ಗೆ ಯಾವುದೇ ಕ್ರಮ ವಹಿಸದ ಕಾರಣ ಅನಾಹುತವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News