ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಳ ನಿಂದನೆ : ಆರೋಪಿ ಸೆರೆ

Update: 2021-05-16 16:50 GMT

ಉಳ್ಳಾಲ : ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಳನ್ನು ನಿಂದಿಸಿ ಆಡಿಯೋ ಒಂದನ್ನು ಹರಿಯ ಬಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಚೆಂಬುಗುಡ್ಡೆ ನಿವಾಸಿ, ಸ್ವಾಲಿಝ್ ಇಕ್ಬಾಲ್ ಎಂದು ಗುರುತಿಸಲಾಗಿದೆ.

ತೊಕ್ಕೊಟ್ಟಿನ ಚೆಂಬುಗುಡ್ಡೆಯಲ್ಲಿ ಈ ಹಿಂದೆ ಸ್ವಾಲಿಝ್ ಕಿಚನ್ ಸೆಂಟರ್ ಎಂಬ ಮಳಿಗೆ ನಡೆಸುತ್ತಿದ್ದ ಇಕ್ಬಾಲ್ ಸ್ಕೀಮ್ ಗಳನ್ನು ಆರಂಭಿಸಿ ಆಕರ್ಷಕ ಬಹುಮಾನಗಳ ಆಮಿಷ ತೋರಿಸಿ ಅನೇಕ ಗ್ರಾಹಕರನ್ನು ವಂಚಿಸಿರುವ ಆರೋಪ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಹಿಂದೂ ದೇವತೆಗಳನ್ನು ತುಚ್ಚವಾಗಿ ನಿಂದಿಸಿದ ಆಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಳ್ಳಾಲ ಪಿಐ ಸಂದೀಪ್ ಅವರ ನೇತೃತ್ವದ ತಂಡ ಆರೋಪಿ ಇಕ್ಬಾಲ್ ನನ್ನು ಚೆಂಬುಗುಡ್ಡೆಯಲ್ಲಿ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News