ಕಾಸರಗೋಡು ಜಿಲ್ಲೆಯಲ್ಲಿ ಮುಂದುವರಿದ ಗಾಳಿ, ಮಳೆ ; ಅಪಾರ ಹಾನಿ

Update: 2021-05-16 06:31 GMT

ಕಾಸರಗೋಡು : ಜಿಲ್ಲೆಯಲ್ಲಿ ಗಾಳಿ, ಮಳೆ ಇಂದೂ ಮುಂದುವರಿದಿದ್ದು, ಮಂಜೇಶ್ವರ ತಾಲೂಕಿನಲ್ಲಿ ಎರಡು ಮನೆಗಳು ಪೂರ್ಣವಾಗಿ, ನಾಲ್ಕು ಮನೆಗಳು ಭಾಗಶಃ ಹಾನಿಗೊಂಡಿವೆ.

ಶಿರಿಯ ತೀರದ 23 ಕುಟುಂಬಗಳ 110 ಮಂದಿಯನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಕಾಸರಗೋಡು ತಾಲೂಕಿನ ಕಸಬಾ ಬೀಚ್ ಪರಿಸರದ ನಾಲ್ಕು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ವೆಳ್ಳರಿಕುಂಡುವಿನಲ್ಲಿ ಒಂದು ಮನೆ ಹಾನಿಗೊಂಡಿದೆ. ಹೊಸದುರ್ಗ ತಾಲೂಕಿನಲ್ಲಿ ಒಂದು ಮನೆ ಪೂರ್ಣ ಹಾಗೂ ಐದು ಮನೆಗಳು ಭಾಗಶಃ  ಕುಸಿದಿದೆ.

ಭಾರೀ ಮಳೆ ಹಾಗೂ ಕಡಲ್ಕೊರೆತದ ಹಿನ್ನೆಲೆಯಲ್ಲಿ ವಳಿಯಪರಂಬದ 113 ಕುಟುಂಬಗಳ 413 ಮಂದಿಯನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ನಿನ್ನೆ ಸಂಜೆಯಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ಹಲವೆಡೆ ಕೃಷಿ ಹಾನಿ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News