ಬ್ರಹ್ಮಾವರದಲ್ಲಿ ಜನಾಗ್ರಹದ ಹಕ್ಕೊತ್ತಾಯ

Update: 2021-05-16 15:42 GMT

ಉಡುಪಿ, ಮೇ 16: ಜನರ ಜೀವ ಮತ್ತು ಜೀವನ ಉಳಿಸಲು ಆಕ್ಸಿಜನ್ ಬೆಡ್, ವ್ಯಾಕ್ಸಿನ್, ಸಮಗ್ರ ಪಡಿತರ, ಮಾಸಿಕ ನೆರವು ಹಾಗೂ ಪರಿಹಾರದ ಪಂಚ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ವಿಚಾರದಲ್ಲಿ ಸರಕಾರದ ಸಂವೇದನಾ ಶೂನ್ಯ ಧೋರಣೆಯನ್ನು ಖಂಡಿಸಿ ಶನಿವಾರ ಬ್ರಹ್ಮಾವರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜನಾಗ್ರಹದ ಹಕ್ಕೊತ್ತಾಯವನ್ನು ಬ್ರಹ್ಮಾವರದ ಬಿರ್ತಿ ನಾರಾಯಣ ಮಾಸ್ಟರ್ ಕಾಂಪೌಂಡ್ನ ಬಿರ್ತಿ ನಾರಾಯಣ ಮಾಸ್ತರ್ ಸ್ಮಾರಕದ ಎದುರು ಸ್ಥಳೀಯರು ಸೇರಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಬಿರ್ತಿ ಸುರೇಶ್, ಸುಧಾಕರ ಗುಜ್ಜರಬೆಟ್ಟು, ಸುಬ್ರಹ್ಮಣ್ಯ ಪ್ರಸಾದ್, ವರದರಾಜ ಬಿರ್ತಿ, ನಂದಿಕೂರು ಶಾಂತಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News