ಉಪ್ಪಿನಂಗಡಿ: ವಿದ್ಯುತ್ ಸ್ಪರ್ಶಗೊಂಡು ಪವರ್ ಮ್ಯಾನ್ ಮೃತ್ಯು

Update: 2021-05-16 15:51 GMT
ವಿಕಾಸ್

ಉಪ್ಪಿನಂಗಡಿ: ವಿದ್ಯುತ್ ಸಂಪರ್ಕದಲ್ಲಾದ ಲೋಪವನ್ನು ಸರಿಪಡಿಸಲು ಮುಂದಾದ ವೇಳೆ ವಿದ್ಯುತ್ ಸ್ಪರ್ಶಗೊಂಡು ಪವರ್ ಮ್ಯಾನ್ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಪಿಲಿಂಕಲ್ ಎಂಬಲ್ಲಿ ರವಿವಾರ ನಡೆದಿದೆ.

ಮೃತರನ್ನು ವಿಕಾಸ್ ಎಂದು ಗುರುತಿಸಲಾಗಿದೆ.

ಮೂಲತಃ ಬಿಜಾಪುರ ನಿವಾಸಿಯಾಗಿರುವ ಇವರು ಕಳೆದ  5 ವರ್ಷಗಳಿಂದ ಮೆಸ್ಕಾಂ  ಉದ್ಯೋಗಿಯಾಗಿದ್ದು, ಕಲ್ಲೇರಿ ವಲಯ ಮೆಸ್ಕಾಂ ನಲ್ಲಿ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಳೆಯ ಕಾರಣಕ್ಕೆ ವಿದ್ಯುತ್ ಕಂಬದಲ್ಲಿ ವಿದ್ಯುತ್ ಅರ್ತಿಂಗ್ ಆಗಿದ್ದರಿಂದ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ.

ಮೃತ ವಿಕಾಸ್ ವಿವಾಹಿತರಾಗಿದ್ದು, ಪತ್ನಿ ಹಾಗೂ ಒಂದು ತಿಂಗಳು ಪ್ರಾಯದ ಪುಟ್ಟ ಮಗುವನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು, ಉಪ್ಪಿನಂಗಡಿ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಎಎಸೈ ಜನಾರ್ದನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News