ಡಿವೈಎಫ್‌ಐ ಮಂಗಳೂರು ಸಹಾಯವಾಣಿಯಿಂದ ರಕ್ತದಾನ ಶಿಬಿರ

Update: 2021-05-17 17:24 GMT

ಮಂಗಳೂರು, ಮೇ 17: ಕೋವಿಡ್‌ಗೆ ಸಂಬಂಧಿಸಿ ಡಿವೈಎಫ್‌ಐ ಸಂಘಟನೆಯ ಹೆಲ್ಪ್ಲೈನ್ ಹಲವು ದಿನಗಳಿಂದ ನಿರಂತರ ಕೆಲಸ ನಿರ್ವಹಿಸು ತ್ತಿರುವ ಮಧ್ಯೆಯೇ ಸೋಮವಾರ ಡಿವೈಎಫ್‌ಐ ಕಾರ್ಯಕರ್ತರು ಬೆಂಗರೆ ಪ್ರದೇಶದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಾನ ಮಾಡಿದರು.

ಈ ವೇಳೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಹಾಯವಾಣಿ ನೇತೃತ್ವ ವಹಿಸಿರುವ ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರಾದ್ಯಕ್ಷ ನವೀನ್ ಕೊಂಚಾಡಿ, ನೌಶಾದ್ ಬೆಂಗರೆ, ರಿಯಾಝ್ ಬೆಂಗರೆ, ಬಿಲಾಲ್ ಬೆಂಗರೆ, ಅಸ್ಲಂ, ಮುಹಾಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News