ಕೊರೋನ ಸಂಕಷ್ಟ ಕಾಲದಲ್ಲಿ ನಡುಪದವು ಜಮಾಅತ್ನಿಂದ ಮಾದರಿ ಸೇವೆ
ಕೊಣಾಜೆ : ಕೈರಂಗಳ ಗ್ರಾಮದ ನಡುಪದವಿನ ಅಲ್ ಉಮರ್ ಜುಮಾ ಮಸೀದಿಯ ನಡುಪದವು ಜಮಾಅತ್ ಕಮಿಟಿಯು ಕೊರೊನ ನಿಯಂತ್ರಣ ಹಾಗೂ ಈ ಸಂಕಷ್ಟ ಕಾಲಘಟ್ಟದಲ್ಲಿ ಸ್ಥಳೀಯರ ಆರೋಗ್ಯ ರಕ್ಷಣೆ ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಮುಂದಾಗಿ ತಂಡದ ರೂಪದಲ್ಲಿ ಕಾರ್ಯನಿರ್ವಹಿಸುವ ಮೂಲಕ ಮಾದರಿ ಸೇವೆಗೆ ಮುನ್ನುಡಿ ಬರೆದಿದ್ದು ಇದೀಗ ಈ ಸಾಮಾಜಿಕ ಜವಬ್ದಾರಿಯ ಸೇವೆಯು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
ಮಸೀದಿ ಸಮಿತಿಯ ಅಧೀನದಲ್ಲಿ ಎಲ್ಲರಿಗೂ ಆರೋಗ್ಯ, ಆಹಾರ, ಶಿಕ್ಷಣ ಎಂಬ ಧ್ಯೇಯದಡಿಯಲ್ಲಿ ಕೊರೋನ ಸಂಕಷ್ಟದಲ್ಲಿ ಯಾರಿಗೂ ತೊಂದರೆ ಯಾಗದಂತೆ ತಂಡಗಳ ಮೂಲಕ ಕಾರ್ಯಾಚರಣೆ ನಡೆಸಿ ಮುನ್ನಡೆಯುತ್ತಿದೆ. ಈಗಾಗಲೇ `ನಡುಪದವು ಹೆಲ್ಪ್ ಸರ್ವಿಸ್' ಎಂಬ ಸ್ಥಳೀಯ 30 ಯುವಕರ ತಂಡವನ್ನು ರೂಪಿಸಿ ಪ್ರತಿಯೊಬ್ಬರಿಗೂ ಆಯಾ ವ್ಯಾಪ್ತಿಯ ಮನೆಗಳ ಜವಬ್ಧಾರಿಯನ್ನು ನೀಡಲಾಗಿದೆ. ಈ ಜಮಾಅತ್ ನಲ್ಲಿ ಒಟ್ಟು 140 ಮುಸ್ಲಿಮರ ನೊಂದಾಯಿತ ಮನೆಗಳಿವೆ. ಆದರೆ ಈ ಸೇವೆಯು ಕೇವಲ ಮುಸ್ಲಿಂ ಮನೆಗಳಿಗೆ ಮಾತ್ರ ಸೇವೆಯನ್ನು ಸೀಮಿತ ಗೊಳಿಸದೆ ಎಲ್ಲಾ ಧರ್ಮದವರಿಗೂ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸಿ ಮಾನವೀಯತೆಯ ಜೊತೆಗೆ ಸಾಮರಸ್ಯದ ಸೇವೆಗೆ ಮುಂದಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಸುಮಾರು 250ಕ್ಕೂ ಹೆಚ್ಚಿನ ಮನೆಗಳ ವ್ಯಾಪ್ತಿಗಳಿಗೆ ಈ ಸೇವೆಯನ್ನು ಈ ತಂಡಗಳ ಮೂಲಕ ಒದಗಿಸಲಾಗುತ್ತಿದೆ.
ಅಲ್ಲದೆ ಕೊರೋನ ಸಂದರ್ಭದಲ್ಲಿ ಇತರ ಯಾವುದಾದರೂ ಕಾಯಿಲೆ ಇದ್ದರೂ ಜನರು ಆಸ್ಪತ್ರೆಗಳಿಗೆ ತೆರಳಲು ಹಿಂಜರಿಯುತ್ತಾರೆ. ಈ ಹಿನ್ನೆಲೆ ಯಲ್ಲಿಯೂ ಅಂತವರಿಗೆ ದೈರ್ಯ ತುಂಬಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ತಂಡಗಳ ರಚನೆ
ಕೊರೋನ ಸಂಕಷ್ಟ ಕಾಲದಲ್ಲಿ ಜ್ವರ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡಿದರೆ ಅದಕ್ಕಾಗಿ ಆರು ವಾಹನಗಳನ್ನು ಸಿದ್ದಪಡಿಸಲಾಗಿದ್ದು, ಇದಕ್ಕೆ ಚಾಲಕರ ತಂಡವನ್ನೂ ರೂಪಿಸಲಾಗಿದ್ದು, ಅನಾರೋಗ್ಯ ಪೀಡಿತರನ್ನು ಯಾವುದೇ ತೊಂದರೆಯಾಗದಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುವ ಜವಬ್ದಾರಿಯನ್ನು ನೀಡಲಾಗಿದೆ. ಅಲ್ಲದೆ ಅಗತ್ಯ ಔಷಧ ಪೂರೈಸಲು ಇಲ್ಲಿಯ ಮೆಡಿಕಲ್ ವಿಭಾಗದ ವಿದ್ಯಾರ್ಜನೆಯನ್ನು ಮಾಡಿ ರುವ ಯುವಕರನ್ನು ನೇಮಿಸಲಾಗಿದೆ. ಅಗತ್ಯ ಮಾಹಿತಿಗಳಿಗಾಗಿ ವಾಟ್ಸಪ್ ಗ್ರೂಪನ್ನು ಕೂಡಾ ರಚನೆಮಾಡಲಾಗಿದೆ. ಜಮಾಅತ್ ಕಮಿಟಿಯಲ್ಲಿ ಅಧ್ಯಕ್ಷರಾಗಿರುವ ಎನ್ಎಸ್ ನಾಸೀರ್ ನಡುಪದವು, ಕಾರ್ಯದರ್ಶಿ ಆಸೀಫ್ ಹಾಜಿ, ಕೋಶಾಧಿಕಾರಿಯಾಗಿ ಇಬ್ರಾಹಿಂ ನಡುಪದವು ಹಾಗೂ ಇತರ ಪದಾಧಿಕಾರಿಗಳು ಈ ಸೇವೆಯ ಜವಬ್ದಾರಿಯನ್ನು ವಹಿಸಿ ಮುನ್ನಡೆಸುತ್ತಿದ್ದಾರೆ.
ಮದರಸದಲ್ಲಿ ವ್ಯವಸ್ಥೆ
ಕೊರೋನ ಸೋಂಕಿತರು ಅಥವಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕ್ವಾರೈಂಟನ್ನಲ್ಲಿ ಇರಲು ಅಗತ್ಯವಾದರೆ ನಡುಪದವು ಮಸೀದಿಯ ಆವರಣದಲ್ಲಿರುವ ಕಟ್ಟಡದಲ್ಲಿ ಹಾಗೂ ಮದರಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪ್ರತ್ಯೇಕ ಶೌಚಾಲಯ, ಕಿಚನ್ ವ್ಯವಸ್ಥೆ ಹಾಗೂ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಎಲ್ಲಾ ಮೆಡಿಕಲ್ ಕಿಟ್ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೆಲವು ಮನೆಯಲ್ಲಿ ಕುಟುಂಬಸ್ಥರ ನಡುವಿನಲ್ಲಿ ಸೋಂಕಿತರಿಗೆ ಅಥವಾ ಕ್ವಾರಂಟೈನ್ ನಲ್ಲಿರಲು = ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಇಲ್ಲಿ ವ್ಯವಸ್ಥೆಗೆ ಅನುಕೂಲವಾಗುತ್ತದೆ.
ಇಲ್ಲಿ ತಂಗುವರ ಆರೋಗ್ಯವನ್ನು ವಿಚಾರಿಸಲು ಊರಿನಲ್ಲಿಯೇ ಇರುವ ಸರ್ಸಿಂಗ್, ಪ್ಯಾರಾ ಮೆಡಿಕಲ್ ಕಲಿತವರು ಸಹಾಯ ಮಾಡುತ್ತಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಇಲ್ಲೇ ವೈದ್ಯರನ್ನು ಕರೆಸಿ ವ್ಯವಸ್ಥೆಯನ್ನು ಮಾಡಲಾಗಿದೆ.
ಸಾಮರಸ್ಯದ ಸೇವೆ
ನಡುಪದವಿನ ಜಮಾಅತ್ನಿಂದ ಕೊರೋನ ಸಂಕಷ್ಟದ ಸಮಯದಲ್ಲಿ ನಡೆಯುತ್ತಿರುವ ಆರೋಗ್ಯ, ಆಹಾರ ಮತ್ತು ಶಿಕ್ಷಣ, ಮೂಲಭೂತ ಸೌಕರ್ಯಗಳ ಪೂರೈಕೆಯಂತ ಮಾದರಿ ಸೇವೆಯು ಕೇವಲ ಮುಸ್ಲಿಂ ಮನೆಗಳಿಗೆ ಮಾತ್ರ ಸೀಮಿತವಾಗದೆಈ ವ್ಯಾಪ್ತಿಯ ಸರ್ವಧರ್ಮದ ಜನರಿಗೂ ಲಭಿಸುತ್ತಿದ್ದು, ಮಾದರಿ ಕಾರ್ಯದೊಂದಿಗೆ ಸಾಮರಸ್ಯತೆಗೂ ಸಾಕ್ಷಿಯಾಗಿದೆ.
ಎಲ್ಲೆಡೆಯೂ ಕೊರೋನ ಸಂಕಷ್ಟವು ಎದುರಾಗಿರುವ ಇಂತಹ ಸಂದರ್ಭದಲ್ಲಿ ನಮ್ಮ ವ್ಯಾಪ್ತಿಯಲ್ಲಿ ಜನರಿಗೆ ಯಾವುದೇ ತೊಂದರೆಯಾಗದಂತೆ ಆರೋಗ್ಯ, ಆಹಾರ ಹಾಗೂ ಮೂಲಭೂತ ವ್ಯವಸ್ಥೆಗಾಗಿ ಜಮಾಅತ್ ಮೂಲಕ ಈ ವ್ಯವಸ್ಥೆಯನ್ನು ಮಾಡಲಾಗಿದೆ. ಒಟ್ಟಿನಲ್ಲಿ ಈ ಸಂಕಷ್ಟ ಕಾಲ ದಲ್ಲಿ ನಮ್ಮೂರಿನ ಜನರು ಆರೋಗ್ಯ, ಆಹಾರ, ಶಿಕ್ಷಣ ವಿಷಯದಲ್ಲಿ ಯಾರಿಗೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ನಡುಪದವು ಜಮಾಅತ್ ಮೂಲಕ ಈ ರೀತಿಯ ವವಸ್ಥೆ ಮಾಡಲಾಗಿದೆ.
- ಎನ್.ಎಸ್.ನಾಸೀರ್ ನಡುಪದವು, ಜಮಾಅತ್ ಅಧ್ಯಕ್ಷ