ಯುವ ಕಾಂಗ್ರೆಸ್ ಸಮಿತಿ ಪಾಣೆಮಂಗಳೂರು ವತಿಯಿಂದ ನಿರಾಶ್ರಿತರಿಗೆ ಊಟ ವಿತರಣೆ

Update: 2021-05-20 18:24 GMT

ಬಿ.ಸಿ.ರೋಡ್ : ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಲಾಕ್ ಡೌನ್ ನಿಂದಾಗಿ ಸಂಕಷ್ಟ ಒಳಗಾಗಿರುವ ವಲಸೆ ಕಾರ್ಮಿಕರು, ನಿರಾಶ್ರಿತರಿಗೆ ಮಧ್ಯಾಹ್ನದ ಊಟ ವಿತರಣೆಯು  ಹದಿನೇಳನೇ ದಿನವಾದ (ಇಂದು) ಗುರುವಾರ ಬಿ.ಸಿ.ರೋಡ್ ಪರಿಸರದಲ್ಲಿ ನಡೆಯಿತು.

ಬ್ಲಾಕ್ ಅಧ್ಯಕ್ಷ ರಾದ ಇಬ್ರಾಹಿಂ ನವಾಝ್ ಮುಂದಾಳತ್ವದಲ್ಲಿ ಕೊಡುಗೈ ದಾನಿಗಳು, ಹಾಗೂ ಹಲವರ ಸಹಕಾರದೊಂದಿಗೆ ಅತ್ಯಂತ ಯಶಸ್ವಿ ಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ನೆಟ್ಲಮುಡ್ನೂರು ಗ್ರಾಮ ಪಂಚಾಯಿತ್ ಸದಸ್ಯ ಲತೀಫ್ ನೇರಳಕಟ್ಟೆ, ವಿಟ್ಲಪಡ್ನೂರು ಗ್ರಾ.ಪಂ.ಮಾಜಿ ಸದಸ್ಯ ಸಿದ್ದೀಕ್ ಸರವು, ಬ್ಲಾಕ್ ಯುವ ಕಾಂಗ್ರೆಸ್ ಸಲಹೆಗಾರರಾದ ಉಮ್ಮರ್ ಕುಂಞಿ ಸಾಲೆತ್ತೂರು, ಯುವ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳಾದ ಸಂದೀಪ್ ವೀರಕಂಭ , ಪ್ರಸಾದ್ ನರಿಕೊಂಬು, ಹಫೀಜ್ ಸಾಲೆತ್ತೂರು, ಆಲಿಂ, ರಾಹುಲ್ ಬಿ.ಸಿ ರೋಡ್ , ಸಿರಾಜ್ ಮದಕ, ಗೀತೇಶ್ ಕರ್ಕೇರಾ, ಇಸ್ರಾರ್ ಗೂಡಿನಬಳಿ, ಶರೀಫ್ ಭೋಯಾ ಆಲಡ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News