ಕಲಾ ಸಂಘಟಕ ಶಿವರಾಮ್ ನಿಧನ

Update: 2021-05-30 16:21 GMT

ಕೋಟ, ಮೇ 30: ಸಾಲಿಗ್ರಾಮ ಕಾರ್ಕಡದ ನಿವಾಸಿ ಕಲಾ ಸಂಘಟಕ ಶಿವರಾಮ್ ಕೆ.(48) ರವಿವಾರ ತಡರಾತ್ರಿ ನಿಧನರಾದರು.

ಕಾರ್ಕಡ ಗೆಳೆಯರ ಬಳಗದಲ್ಲಿ ಕಳೆದ 18ವರ್ಷಗಳಿಂದ ನಿರಂತರವಾಗಿ ಪ್ರಧಾನ ಕಾರ್ಯದರ್ಶಿಯಾಗಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಸಾಲಿಗ್ರಾಮ ಶಾಖೆಯ ಪ್ರಬಂಧಕರಾಗಿ, ಮೂಡುಗಿಳಿಯಾರು ಮಹಾಗಣಪತಿ ಯಕ್ಷಗಾನ ಸಂಘಟನೆ, ಗಿಳಿಯಾರು ಯುವಕ ಮಂಡಲ, ಕೋಟ ವಿವೇಕ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರರು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಕೋಟ ಸಹಕಾರಿ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News