ಆಶ್ರಮದಲ್ಲಿ ವೃದ್ಧ ಸಾವು ಪ್ರಕರಣ : ಆರೋಪಿ ಬಂಧನ

Update: 2021-05-30 16:35 GMT

ಬ್ರಹ್ಮಾವರ, ಮೇ 30: ಬ್ರಹ್ಮಾವರದ ಸ್ನೇಹಾಲಯ ವೃದ್ಧಾಶ್ರಮದಲ್ಲಿ ಸ್ನಾನ ಮಾಡುವ ವಿಚಾರದಲ್ಲಿ ದೂಡಿದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟ ಘಟನೆ ಮೇ 29ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಪುಟ್ಟಣ್ಣ(70) ಎಂದು ಗುರುತಿಸಲಾಗಿದೆ. ಈ ಸಂಬಂಧ ಉತ್ತರ ಪ್ರದೇಶದ ಮೂಲದ ತೇಜು (75) ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತೇಜು ಎಂಬವರಿಗೆ ಸ್ನಾನ ಮಾಡಿಸುವ ಬಗ್ಗೆ ಅವರು ವಿಶ್ರಾಂತಿ ಪಡೆಯುವ ಬೆಡ್‌ನಿಂದ ಹಾಲ್‌ನ ಸಮೀಪದ ಬಾತ್‌ರೂಮಿಗೆ ಅದೇ ಆಶ್ರಮದ ವಾಸಿ ಪುಟ್ಟಣ್ಣ ಎಂಬವರು ಕರೆದುಕೊಂಡು ಬರುವಾಗ, ತೇಜು ಸ್ನಾನಕ್ಕೆ ಬರಲು ಒಪ್ಪದೆ ಪುಟ್ಟಣ್ಣರವರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ದುಡುಕಿನಿಂದ ಪುಟ್ಟಣ್ಣ ಮೇಲೆ ಬಲ ಪ್ರಯೋಗ ಮಾಡಿದರು. ಇದರ ಪರಿಣಾಮ ಪುಟ್ಟಣ್ಣ ಆಯ ತಪ್ಪಿಹಾಲ್‌ನ ನೆಲಕ್ಕೆ ಬಿದ್ದು ಗಂಭೀರ ವಾಗಿ ಗಾಯಗೊಂಡು ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News