×
Ad

​ವೈದ್ಯರಿಗೆ ಹಲ್ಲೆ ಆರೋಪ: ಇಬ್ಬರ ಬಂಧನ

Update: 2021-06-01 22:23 IST

ಮಂಗಳೂರು, ಜೂ.1: ನಗರದ ಖಾಸಗಿ ಆಸ್ಪತ್ರೆಯ ಕರ್ತವ್ಯ ನಿರತ ವೈದ್ಯರಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಕದ್ರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ನಗರದ ಮಾರ್ನಮಿಕಟ್ಟೆಯ ಶಂಶೀರ್ ಅಲಿ (43), ಚೊಕ್ಕಬೆಟ್ಟು ನಿವಾಸಿ ಸರ್ಫರಾಝ್ (27) ಬಂಧಿತ ಆರೋಪಿಗಳು.

ರೋಗಿಯೊಬ್ಬರ ಚಿಕಿತ್ಸೆಗೆ ಸಂಬಂಧಿಸಿದಂತೆ ತಂಡವೊಂದು ಖಾಸಗಿ ಆಸ್ಪತ್ರೆಯ‌ ವೈದ್ಯರಾದ ಡಾ. ಜಯಪ್ರಕಾಶ್‌ ಎಂಬವರಿಗೆ ಮೇ 21ರಂದು ಹಲ್ಲೆ ನಡೆಸಿದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಇಬ್ಬರು ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News