​ಪ್ರತ್ಯೇಕ ಪ್ರಕರಣ: ಬಾವಿಗೆ ಹಾರಿ ಇಬ್ಬರ ಆತ್ಮಹತ್ಯೆ

Update: 2021-06-04 16:40 GMT

ಬ್ರಹ್ಮಾವರ, ಜೂ. 4: ವಿಪರೀತ ಹೊಟ್ಟೆನೋವುನಿಂದ ಬಳಲುತ್ತಿದ್ದ ಹೇರಾಡಿ ಗ್ರಾಮದ, ಕೂಡ್ಲಿ ನಿವಾಸಿ ಬಾಬಣ್ಣ ನಾಯ್ಕ(75) ಎಂಬವರು  ಜೀವನದಲ್ಲಿ ಜಿಗುಪ್ಸೆಗೊಂಡು ಜೂ.3ರಂದು ಮಧ್ಯಾಹ್ನ ಮನೆಯ ಹತ್ತಿರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಮಕ್ಕಳಾಗದ ಚಿಂತೆಯಲ್ಲಿ ಮಾನಸಿಕ ಖಾಯಿಲೆ ಯಿಂದ ಬಳಲುತ್ತಿದ್ದ ಹಾವಂಜೆ ಅಂಗಡಿಬೆಟ್ಟು ನಿವಾಸಿ ಪ್ರಕಾಶ್ ಶೆಟ್ಟಿ (40) ಎಂಬವರು ಜೂ.3ರಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News