ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್‌ನಿಂದ ದ.ಕ. ಜಿಲ್ಲಾಡಳಿತಕ್ಕೆ ನೆರವು

Update: 2021-06-09 12:28 GMT

ಮಂಗಳೂರು, ಜೂ. 9: ದ.ಕ. ಜಿಲ್ಲಾಡಳಿತಕ್ಕೆ 20 ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿ ದಂತೆ ಸ್ಯಾನಿಟೈಸರ್, ಸಾಬೂನು ಹಾಗೂ ಮಾಸ್ಕ್ ಒಳಗೊಂಡ ಸುಮಾರು 8 ಲಕ್ಷ ರೂ. ಮೌಲ್ಯದ ಕಿಟನ್ನು ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಹಸ್ತಾಂತರಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರಿಗೆ ಸಂಸ್ಥೆಯ ಫ್ಯಾಕ್ಟರಿ ಮ್ಯಾನೇಜರ್ ಸಂಜಯ್ ಸಿಕ್ವೇರ, ಎಚ್‌ಆರ್ ಮ್ಯಾನೇಜರ್ ರಾಜ್ ಕುಮಾರ್ ವರ್ಮಾ ಹಾಗೂ ಎಚ್‌ಆರ್ ಎಕ್ಸಿಕ್ಯುಟಿವ್ ಚಿದಾನಂದ ಯೆಯ್ಯಿಡಿ ಕಿಟ್ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News