ಕೃಷಿ ಕಾನೂನುಗಳನ್ನು ಹೊರತುಪಡಿಸಿ ಬೇರೆ ವಿಷಯ ರೈತರ ಜತೆ ಚರ್ಚಿಸಲು ಸಿದ್ಧ: ಸಚಿವ ನರೇಂದ್ರ ಸಿಂಗ್ ತೋಮರ್

Update: 2021-06-09 09:48 GMT

ಹೊಸದಿಲ್ಲಿ: ಕೃಷಿ ಕಾನೂನುಗಳನ್ನು ಹೊರತುಪಡಿಸಿ ಬೇರೆ ವಿಚಾರಗಳ ಕುರಿತು ಪ್ರತಿಭಟನಾನಿರತ ರೈತರ ಜತೆ ಚರ್ಚಿಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

"ರೈತ ಸಂಘಟನೆಗಳು ಕೃಷಿ ಕಾಯಿದೆಗಳನ್ನು ಹೊರತುಪಡಿಸಿ ಇತರ ವಿಚಾರಗಳ ಕುರಿತು ಚರ್ಚಿಸಲು ಸಿದ್ಧವಿದ್ದರೆ ಸರಕಾರ ಕೂಡ ಅವರ ಜತೆಗೆ ಮಾತುಕತೆಗೆ ಸಿದ್ಧವಿದೆ" ಎಂದು ಅವರು ಹೇಳಿದರು.

ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಸಾವಿರಾರು ರೈತರು ದಿಲ್ಲಿಯ ಹೊರವಲಯದಲ್ಲಿ  ಕಳೆದ ನವೆಂಬರ್ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದಾರೆ. ಎರಡೂ ಕಡೆಗಳ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದಿವೆಯಾದರೂ ಎರಡು ವರ್ಷಗಳ ಮಟ್ಟಿಗೆ ಕಾಯಿದೆ ಜಾರಿ ತಡೆಹಿಡಿಯಲು ಕೇಂದ್ರ ಮಾಡಿದ ಆಫರ್ ಅನ್ನು ರೈತರು ತಿರಸ್ಕರಿಸಿದ ನಂತರ  ಮಾತುಕತೆಗಳು ಮುಂದುವರಿದಿಲ್ಲ. ಎರಡೂ ಕಡೆಗಳ ನಡುವೆ ಕೊನೆಯ ಬಾರಿ ಜನವರಿ 22ರಂದು ಮಾತುಕತೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News