ಉಳ್ಳಾಲ: ತೈಲ ಬೆಲೆ ಏರಿಕೆ ವಿರೋಧಿಸಿ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ

Update: 2021-06-15 16:07 GMT

ಉಳ್ಳಾಲ : ಕೇಂದ್ರ ಸರ್ಕಾರ ತೈಲ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬ್ಲಾಕ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿಯವರ ನೇತೃತ್ವದಲ್ಲಿ ಉಳ್ಳಾಲ ವ್ಯಾಪ್ತಿಯ ಉಚ್ಚಿಲ ಹಾಗೂ ಕೋಟೆಕಾರ್ ನಲ್ಲಿ  ಪ್ರತಿಭಟನೆ ನಡೆಯಿತು.

ದೇಶದಲ್ಲಿ ಪೆಟ್ರೋಲ್ ದರ ಗಗನಕ್ಕೇರಿಸಿದ ಬಿಜೆಪಿ ಸರ್ಕಾರ ಜನರನ್ನು ಕಷ್ಟದ ಕೂಪಕ್ಕೆ ತಳ್ಳಿದೆ. ಸರ್ಕಾರ ದ ಜನ ವಿರೋಧಿ ನೀತಿಯಿಂದ ಜನರು ಕಂಗಾಲಾಗಿದ್ದಾರೆ ಎಂದು ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಹೇಳಿದರು.

ದೇರಳಕಟ್ಟೆ: ಕೇಂದ್ರ ಸರ್ಕಾರ ಪೆಟ್ರೋಲ್ ದರ ಏರಿಕೆ ವಿರೋಧಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್, ಬ್ಲಾಕ್ ಯೂತ್ ಕಾಂಗ್ರೆಸ್, ದೇರಳಕಟ್ಟೆ ವಲಯ ಕಾಂಗ್ರೆಸ್ ವತಿಯಿಂದ ದೇರಳಕಟ್ಟೆ ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮೊಹಮ್ಮದ್ ಮೋನ್, ಆಳ್ವಿನ್ ಡಿಸೋಜ, ಹರೀಶ್ ರಾವ್, ಮೋನು, ವೈಭವ್ ಶೆಟ್ಟಿ, ಸಿದ್ದೀಕ್, ಖಾದರ್,  ಬಶೀರ್ ಮುಂಡೋಳಿ, ಸುರೇಖಾ, ವಿನೂತ್, ಇಸ್ಮಾಯಿಲ್, ಶಬೀರ್, ಇಕ್ಬಾಲ್ ಸಾಮಣಿಗೆ, ಪುರುಷೋತ್ತಮ ಅಂಚನ್, ವಿಶಾಲ್, ಲತಾ ವಿಶ್ವ ನಾಥ್, ರಾಜೇಶ್ವರಿ, ಅನಿತಾ ಸಲ್ದಾನ, ಮನ್ಸೂರ್, ಮೊಯ್ದಿನ್ ಬಾವ ಕೋಟೆ ಕಾರ್, ಮುಹಮ್ಮದ್ ಕಿನ್ಯ, ಅಹ್ಮದ್ ಅಜ್ಜಿನಡ್ಕ, ವಿನು ಶೆಟ್ಟಿ, ಗೋಪಾಲ, ಬಶೀರ್ ಕೊಳಂಗರೆ, ಬಾತೀಶ್ ಅಜ್ಜಿ ನಡ್ಕ, ಸುರೇಂದ್ರ ಬಗಂಬಿಲ, ಕಿಶೋರ್ ಗಟ್ಟಿ, ಜಬ್ಬಾರ್ ಬೋಳಿಯಾರ್, ಪ್ಲೇವಿ ಪೆರಾವೋ ನಾಗೇಶ್ ಶೆಟ್ಟಿ ತೊಕ್ಕೋಟು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News