​ಕುಂದಾಪುರ: ಬೆಲೆ ಏರಿಕೆ ವಿರುದ್ಧ ರಿಕ್ಷಾ ಚಾಲಕರ ಪ್ರತಿಭಟನೆ

Update: 2021-06-16 13:51 GMT

ಕುಂದಾಪುರ, ಜೂ.16: ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆ ಹಾಗು ಜನರ ಜೀವನಾವಶ್ಯಕ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸಿಐಟಿಯು ಸಂಘಟನೆಗೆ ಸೇರಿದ ಕುಂದಾಪುರದ ರಿಕ್ಷಾ ಚಾಲಕರು ಅಲ್ಲಲ್ಲಿ ಪ್ರತಿಭಟನೆ ನಡೆಸಿದರು.

ಕುಂದಾಪುರ ಶಾಸ್ತ್ರಿ ವೃತ್ತದ ಬಳಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜು ದೇವಾಡಿಗ, ಮುಖಂಡರಾದ ಉಮೇಶ್ ಶೇರೆಗಾರ, ಗೋವಿಂದ ಗುಡಾರ್‌ಹಕ್ಲು, ರಮೇಶ್ ವಿ, ಸುಧೀರ್, ಚಂದ್ರ ವಿ, ಜೋಸೆಫ್ ಸೆರಾವೋ ಮುಂತಾದವರು ಭಾಗವಹಿಸಿದ್ದರು.

ಶ್ರೀದೇವಿ ರಿಕ್ಷಾ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಪುಟ್ಟ ಪೂಜಾರಿ, ನವಚೇತನ ನಾರಾಯಣ, ಪುರಸಭಾ ರಿಕ್ಷಾ ನಿಲ್ದಾಣದಲ್ಲಿ ನಡೆದ ಪ್ರತಿಭಟನೆ ಯಲ್ಲಿ ಮಲ್ಲಿಕಾರ್ಜುನ, ಬಾಬು, ರಘು ಹಟ್ಟಿಕುದ್ರು ಭಾಗವಹಿಸಿದ್ದರು.

ಬೆಲೆ ಏರಿಕೆ ವಿರುದ್ಧ ಮನೆಮನೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಚಂದ್ರಶೇಖರ್, ಶೇಖರ್ ಡಿ, ನರಸಿಂಹ ಪೂಜಾರಿ ಬಿ, ರವಿ ವಿ. ಎಂ., ಕೇಶವ ಮೊಗವೀರ ಮುಂತಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News