ಬೈಂದೂರು: ಗೇರುಬೀಜ ಕಾರ್ಖಾನೆ ಗೋದಾಮಿನಲ್ಲಿ 4 ಲಕ್ಷ ರೂ. ಮೌಲ್ಯದ ಅನ್ನಭಾಗ್ಯದ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

Update: 2021-06-16 15:40 GMT

ಬೈಂದೂರು, ಜೂ.16: ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಅಗಸ್ತೇಶ್ವರ ಕಾಲೋನಿಯ ನಿವಾಸಿ ಅಯೂಬ್ (32) ಎಂಬಾತ, ಕಾಲ್ತೋಡು ಗ್ರಾಮದ ಬೋಳಂಬಳ್ಳಿ ಎಂಬಲ್ಲಿನ ಪ್ರಥ್ವಿ ಗೇರುಬೀಜ ಕಾರ್ಖಾನೆಯ ಗೋದಾಮಿನಲ್ಲಿ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿದ್ದಾರೆನ್ನಲಾದ ಲಕ್ಷಾಂತರ ರೂ. ಮೌಲ್ಯದ ಉಚಿತ ಅನ್ನಭಾಗ್ಯ ಅಕ್ಕಿಯನ್ನು ಬೈಂದೂರು ತಾಲೂಕು ಆಹಾರ ನಿರೀಕ್ಷಕರಾದ ವಿನಯಕುಮಾರ್ ಅವರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಮಂಗಳವಾರ ಸಂಜೆ 5:00ಗಂಟೆಗೆ ಪೃಥ್ವೀರಾಜ್ ಜೈನ್ ಎಂಬವರಿಗೆ ಸಂಬಂಧಿಸಿದ ಬೋಳಂಬಳ್ಳಿಯ ಗೇರುಬೀಜ ಕಾರ್ಖಾನೆಯ ಗೋದಾಮಿಗೆ ದಾಳಿ ನಡೆಸಿದ ವಿನಯಕುಮಾರ್, ಅಲ್ಲಿದ್ದ 4.02 ಲಕ್ಷ ರೂ.ಮೌಲ್ಯದ 335 ಚೀಲ (16,750ಕೆ.ಜಿ.)ಅಕ್ಕಿ, ಇಲೆಕ್ಟ್ರಾನಿಕ್ಸ್ ತೂಕದ ಯಂತ್ರ, ಚೀಲ ಹೊಲಿಯುವ ಯಂತ್ರ ಹಾಗೂ 10 ಗೋಣಿ ಚೀಲಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News