ರಸ್ತೆ ಅಪಘಾತ: ಬೈಕ್ ಸವಾರರಿಬ್ಬರು ಮೃತ್ಯು

Update: 2021-06-16 16:26 GMT

ಮುಂಡಗೋಡ: ಬೋಲೆರೋ ಪಿಕ್‍ಅಪ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆಯ ಹುಡೇಲಕೊಪ್ಪ ಗ್ರಾಮ ಹತ್ತಿರ ಬುಧವಾರ ನಡೆದಿದೆ.

ರಾಜೇಶ ಚಲವಾದಿ(21) ಮತ್ತು ಶ್ರೀಕಾಂತ ವಡ್ಡರ ಮೃತಪಟ್ಟವರು.

ಬೋಲೆರೋ ಪಿಕ್‍ಅಪ್ ಶಿರಸಿ ಮಾರ್ಗವಾಗಿ ಹುಬ್ಬಳ್ಳಿಗೆ ಹೊರಟಿತ್ತು ಹಾಗೂ ಬೈಕ್ ಸವಾರರು ಮುಂಡಗೋಡದಿಂದ ಪಾಳಾ ಗ್ರಾಮಕ್ಕೆ ತೆರಳುತ್ತಿದ್ದಾಗ ಈ  ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪಿಎಸೈ ಬಸವರಾಜ ಮಬನೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News