ಉದ್ಯಾವರ: ವಿದ್ಯುತ್ ಶಾಕ್‌ನಿಂದ ಯುವಕ ಮೃತ್ಯು

Update: 2021-06-17 16:06 GMT

ಉಡುಪಿ, ಜೂ.17: ಯುವಕನೋರ್ವ ವಿದ್ಯುತ್ ಆಘಾತದಿಂದ ಮೃತಪಟ್ಟ ಘಟನೆ ಗುರುವಾರ ಸಂಜೆ ವೇಳೆ ಉದ್ಯಾವರ ಕನಕೋಡ ಎಂಬಲ್ಲಿ ನಡೆದಿದೆ.

ಮೃತರನ್ನು ಮಲ್ಪೆ ಕೊಡವೂರಿನ ಮನೋಜ್ ಕರ್ಕೇರ ಹಾಗೂ ಶಶಿಕಲಾ ದಂಪತಿ ಪುತ್ರ ಮೋಕ್ಷಿತ್ ಕರ್ಕೇರ (25) ಎಂದು ಗುರುತಿಸಲಾಗಿದೆ.

ಇವರು ತನ್ನ ಚಿಕ್ಕಪ್ಪ ಶಂಕರ್ ಎಂಬವರ ಮನೆಯಲ್ಲಿದ್ದಾಗ ಗಾಳಿಮಳೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದು, ಈ ವೇಳೆ ಮೋಕ್ಷಿತ್ ಮೈನ್ ಸ್ವಿಚ್ ಬೋರ್ಡ್ ಪರಿಶೀಲಿಸಿದ್ದರೆನ್ನಲಾಗಿದೆ.

ಈ ವೇಳೆ ಅವರಿಗೆ ವಿದ್ಯುತ್ ಶಾಕ್ ತಗುಲಿದ್ದು, ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಮೋಕ್ಷಿತ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News