ಆರೋಗ್ಯ ಕೇಂದ್ರ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ ಕಿಟ್ ವಿತರಣೆ

Update: 2021-06-17 16:10 GMT

ಉಡುಪಿ, ಜೂ.17: ಬನ್ನಂಜೆಯಲ್ಲಿರುವ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ನಗರಸಭಾ ಸದಸ್ಯ ರಮೇಶ್ ಕಾಂಚನ್ ಹಾಗೂ ಉದ್ಯಮಿ ಗಳಾದ ಮುರಳಿ ಶೆಟ್ಟಿ, ಗಣೀಶ್ ದೇವಾಡಿಗ, ಗಣೇಶ್ ನೆರ್ಗಿ, ರಮೇಶ್ ಪಾಲ್, ರಿಕಿತ್ ಇವರ ಸಹಕಾರದೊಂದಿಗೆ ಮುಖ ಕವಚ, ಮಾಸ್ಕ್ ಮತ್ತು ದಿನಸಿ ಕಿಟ್‌ಗಳನ್ನು ಬುಧವಾರ ವಿತರಿಸಲಾಯಿತು.

ನಗರಸಭಾ ಸದಸ್ಯ ರಮೇಶ್ ಕಾಂಚನ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕೇಂದ್ರದ ವೈದ್ಯಾಧಿಕಾರಿ ಡಾ.ಹೇಮಂತ್, ಲ್ಯಾಬ್ ಟೆಕ್ನಿಷಿಯನ್ ರಮೇಶ್ ನಾಯ್ಕ್, ಕಛೇರಿ ಸಹಾಯಕಿ ಪ್ರಮಿಳಾ, ರಘುರಾಮ್ ಭಟ್, ಸಂಜಯ್ ಆಚಾರ್ಯ, ಆಶಾ ಸುಗಮಕಾರರಾದ ಹಿಮಾ ವರ್ಗಿಸ್ ಹಾಗೂ ಕೇಂದ್ರದ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News