ಕುಂದಾಪ್ರ ಕನ್ನಡ ಗಲ್ಫ್ ಬಳಗದಿಂದ ಪತ್ರಕರ್ತರಿಗೆ ಫೇಸ್ ಶೀಲ್ಡ್

Update: 2021-06-18 13:50 GMT

ಕುಂದಾಪುರ, ಜೂ.18: ದುಬೈಯ ನಮ್ಮ ಕುಂದಾಪ್ರ ಕನ್ನಡ ಗಲ್ಫ್ ಬಳಗ ವತಿಯಿಂದ ಉಡುಪಿ ಜಿಲ್ಲಾ ಪತ್ರಕರ್ತರಿಗೆ ಕೋವಿಡ್ -19 ರಕ್ಷಣಾತ್ಮಕ ಮುಖ ಗವಸು (ಫೇಸ್ ಶೀಲ್ಡ್)ಗಳನ್ನು ಇಂದು ವಿತರಿಸಲಾಯಿತು.

ಬಳಗದ ಪರವಾಗಿ ದುಬಾಯಿ ಉದ್ಯಮಿ ಶೀನ ದೇವಾಡಿಗ ಕೊಡಪಾಡಿ ಪತ್ರಕರ್ತರಿಗೆ ಫೇಸ್ ಶೀಲ್ಡ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯಾ ಪಾಯ್ಸ್, ಕುಂದಾಪುರ ತಾಲೂಕು ಅಧ್ಯಕ್ಷ ಶಶಿಧರ ಹೆಮ್ಮಾಡಿ, ಉಪಾಧ್ಯಕ್ಷ ಮಝರ್, ಕಾರ್ಯದರ್ಶಿ ನಾಗರಾಜ್ ರಾಯಪ್ಪನಮಠ, ಉಪಕಾರ್ಯದಶಿರ್ ರಾಘು ಬಳಕುರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News