​ಅಪಾರ್ಟ್‌ಮೆಂಟ್‌ನಲ್ಲಿ ನೀರಿನ ಸಂಪರ್ಕ ಕಡಿತ: ಪ್ರಕರಣ ದಾಖಲು

Update: 2021-06-18 16:28 GMT

ಮಂಗಳೂರು, ಜೂ.18: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿರುವ ನೋವೆಲ್ ಎಂಬವರಿಗೆ ಅಪಾರ್ಟ್‌ಮೆಂಟ್‌ನ ಗಣೇಶ್ ಎಂಬಾತ ಇತರ ಸದಸ್ಯರೊಂದಿಗೆ ಸೇರಿ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ನೀರಿನ ಹಣ ನೀಡಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ನೀರಿನ ಸಂಪರ್ಕ ಕಡಿತ ಮಾಡಿ ಮಾನಸಿಕವಾಗಿ ತೊಂದರೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News