ಪಡುಬಿದ್ರಿ: ಟಿಪ್ಪರ್ ಕಳವು

Update: 2021-06-18 17:08 GMT

ಪಡುಬಿದ್ರಿ: ನಿಲ್ಲಿಸಿದ್ದ ಟಿಪ್ಪರನ್ನು ಕಳವು ಮಾಡಿದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಮುದರಂಗಡಿಯಲ್ಲಿ ನಡೆದಿದೆ.

ಮಂಗಳೂರಿನ ಗಂಜಿಮಠದ ಬಳಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯನ್ನು ವಿಪರೀತ ಮಳೆಯಿಂದಾಗಿ ಕಳೆದ 2 ವಾರಗಳಿಂದ ನಿಲ್ಲಿಸಲಾಗಿತ್ತು. ಅಲ್ಲಿನ ಕೆಲಸದ 5 ಟಿಪ್ಪರ್ ಹಾಗೂ 1 ಜೆ.ಸಿ.ಬಿ.ಯನ್ನು  ಸಾಂತೂರು ಗ್ರಾಮದ ಮುದರಂಗಡಿಯ ಅಳುಂಬೆ ಎಂಬಲ್ಲಿರುವ ಡಾಂಬಾರು ಪ್ಲಾಂಟ್‌‌ನ ಕಂಪೌಂಡ್‌‌ನ ಒಳಗಡೆ ನಿಲ್ಲಿಸಲಾಗಿತ್ತು. ಅಲ್ಲಿ ನಿಲ್ಲಿಸಿದ 5 ಟಿಪ್ಪರುಗಳ ಪೈಕಿ KA-20-C-6741 ನೇ ನಂಬ್ರದ ಟಿಪ್ಪರ್ ಕಳವಾದ ಬಗ್ಗೆ ದೂರು ದಾಖಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News