ವೃದ್ಧನ ಮೇಲೆ ಹಲ್ಲೆ ಘಟನೆ:ಎಲ್ಲ 9 ಆರೋಪಿಗಳಿಗೆ ಜಾಮೀನು

Update: 2021-06-19 12:19 GMT
photo: The indian express

ಹೊಸದಿಲ್ಲಿ: ಈ ತಿಂಗಳ ಆರಂಭದಲ್ಲಿ ವಯಸ್ಸಾದ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಎಲ್ಲಾ ಒಂಬತ್ತು ಮಂದಿಗೆ ಉತ್ತರ ಪ್ರದೇಶದ ಗಾಝಿಯಾಬಾದ್ ನಗರದ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ ಎಂದು ಪಿಟಿಐ ಶುಕ್ರವಾರ ವರದಿ ಮಾಡಿದೆ.

ಕಳೆದ ರವಿವಾರದಿಂದ ಈ ಹಲ್ಲೆಯ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆರೋಪಿಗಳು ವೃದ್ದನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಗಡ್ಡವನ್ನು ಕತ್ತರಿಸುತ್ತಿರುವುದು ವೀಡಿಯೊದಲ್ಲಿದೆ. ಈ ಘಟನೆ ಜೂನ್ 5 ರಂದು ಗಾಝಿಯಾಬಾದ್‌ನ ಲೋನಿ ಪ್ರದೇಶದಲ್ಲಿ ನಡೆದಿದೆ.

 ಪೊಲೀಸರು ಜೂನ್ 13 ರಂದು ಪ್ರಮುಖ ಆರೋಪಿ ಪರ್ವೇಶ್ ಗುಜ್ಜರ್ ನನ್ನು ಬಂಧಿಸಿದ್ದರು. ಆ ನಂತರ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.  ಆರೋಪಿಗಳಿಗೆ ಆಗಸ್ಟ್ 17 ರವರೆಗೆ ಮಧ್ಯಂತರ ಜಾಮೀನು ನೀಡಲಾಗಿದೆ. ಆದರೆ, ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜ್ಜರ್ ನ್ಯಾಯಾಂಗ ಬಂಧನದಲ್ಲಿದ್ದಾನೆ  ಎಂದು ಅವರ ವಕೀಲ ಪರ್ವಿಂದರ್ ನಗರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News