ಉಡುಪಿ: ಕುಸಿದು ಬಿದ್ದ ಮಠದಬೆಟ್ಟು ಕಾಲು ಸೇತುವೆ

Update: 2021-06-19 14:00 GMT

ಉಡುಪಿ, ಜೂ.19: ಭಾರೀ ಮಳೆಯಿಂದ ಇಂದ್ರಾಣಿ ಹೊಳೆ ತುಂಬಿ ಹರಿದ ಪರಿಣಾಮ ಶಿಥಿಲಾವಸ್ಥೆಯಲ್ಲಿದ್ದ ನಗರದ ಮಠದಬೆಟ್ಟುವಿನ ಕಾಲು ಸೇತುವೆಯ ಒಂದು ಭಾಗ ಇಂದು ಮಧ್ಯಾಹ್ನ ವೇಳೆ ಕುಸಿದು ಬಿದ್ದಿರುವ ಬಗ್ಗೆ ವರದಿ ಯಾಗಿದೆ.

ಇದರಿಂದ ಮಠದಬೆಟ್ಟು, ಕೊಪ್ಪರತೋಟ, ನಿಟ್ಟೂರು, ಗುಂಡಿಬೈಲುವಿಗೆ ಹೋಗುವ ಒಳದಾರಿಯ ಸಂಪರ್ಕ ಕಡಿತಗೊಂಡಿದೆ.

ಮಠದಬೆಟ್ಟು, ಕೊಪ್ಪರ ತೋಟ ಪರಿಸರದಲ್ಲಿ ಹಲವು ಮನೆಗಳಿದ್ದು, ಇಲ್ಲಿಗೆ ಹೋಗಲು ಹಲವು ಕುಟುಂಬಗಳು ಈ ಕಾಲು ಸಂಕವನ್ನು ಅವಲಂಬಿಸಿಕೊಂಡಿವೆ. ಇದೀಗ ಕುಸಿದು ಬಿದ್ದಿರುವ ಕಾಲು ಸಂಕವನ್ನು ಮಠದಬೆಟ್ಟು ಹಾಗೂ ಕೊಪ್ಪರತೋಟದ ಯುವಕರು ಸೇರಿ ಮರದ ದಿಮ್ಮಿಗಳನ್ನು ಇರಿಸಿ ತಾತ್ಕಾಲಿಕ ವಾಗಿ ದುರಸ್ತಿ ಮಾಡಿದರು. ಆದರೂ ತುಂಬಿ ಹರಿಯುವ ಇಂದ್ರಾಣಿ ನದಿ ಯನ್ನು ಈ ಸಂಕದ ಮೂಲಕ ದಾಟಲು ಜನ ಆತಂಕ ಪಡುವಂತಾಗಿದೆ.

ಸ್ಥಳೀಯರು ಹಲವು ವರ್ಷಗಳಿಂದ ಇಲ್ಲಿ ಸೇತುವೆ ನಿರ್ಮಿಸಿ ಕೊಡುವಂತೆ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ದೂರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News