ಕಾಂಗ್ರೆಸ್ ಕಾರ್ಮಿಕ ಘಟಕಕ್ಕೆ ನೇಮಕ

Update: 2021-06-19 15:18 GMT

ಮಂಗಳೂರು, ಜೂ.19: ಕೆಪಿಸಿಸಿ ಕಾರ್ಮಿಕ ಘಟಕದ ನಿರ್ದೇಶನ ಮೇರೆಗೆ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ಅನುಮೋದನೆ ಹಾಗೂ ಬ್ಲಾಕ್ ಅಧ್ಯಕ್ಷರ ಶಿಫಾರಸ್ಸಿನಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಬ್ಲಾಕ್‌ಗಳಿಗೆ ನೂತನ ಅಧ್ಯಕ್ಷರುಗಳನ್ನು ನೇಮಿಸಲಾಗಿದೆ.

ಬೆಳ್ತಂಗಡಿ ನಗರ ಬ್ಲಾಕ್‌ಗೆ ಸುರೇಶ್ ನಾವೂರು, ಬೆಳ್ತಂಗಡಿ ಗ್ರಾಮೀಣ ಬ್ಲಾಕ್‌ಗೆ ಹಾರಿಸ್ ಪೆರಿಂಜೆ, ಮೂಡುಬಿದಿರೆ ಬ್ಲಾಕ್‌ಗೆ ಅಬೂಬಕರ್ ಶಿರ್ತಾಡಿ, ಮುಲ್ಕಿ ಬ್ಲಾಕ್‌ಗೆ ಕಿರಣ್ ಶೆಟ್ಟಿ ಚೆಲೈರು, ಗುರುಪುರ ಬ್ಲಾಕ್‌ಗೆ ಕೃಷ್ಣ ಬಂಗೇರಾ ಅದ್ಯಪಾಡಿ, ಮಂಗಳೂರು ನಗರ ಬ್ಲಾಕ್‌ಗೆ ಜಯರಾಜ್ ಕೋಟ್ಯಾನ್, ಮಂಗಳೂರು ಉತ್ತರ ಬ್ಲಾಕ್‌ಗೆ ಹಬೆರ್ಟ್ ಪಾಯಿಸ್, ಉಳ್ಳಾಲ ಬ್ಲಾಕ್‌ಗೆ ವಿಲ್ಫ್ರೆಡ್ ಡಿಸೋಜ ಮುನ್ನೂರು, ಮುಡಿಪು ಬ್ಲಾಕ್‌ಗೆ ಅಬ್ದುರ್ರಹ್ಮಾನ್ ಕೈರಂಗಳ, ಬಂಟ್ವಾಳ ಬ್ಲಾಕ್‌ಗೆ ಮನೋಹರ ಕುಲಾಲ್ ನೆರಂಬೋಳ್, ಪಾಣೆಮಂಗಳೂರು ಬ್ಲಾಕ್‌ಗೆ ಉಮೇಶ್ ನರಿಕೊಂಬು, ಪುತ್ತೂರು ಬ್ಲಾಕ್‌ಗೆ ಶರೂನ್ ವಿಲ್ಫ್ರೆಡ್ ಸಿಕ್ವೇರಾ, ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ಗೆ ಶ್ರೀನಿವಾಸ್ ಶೆಟ್ಟಿ ಕೊಲ್ಯಾ, ಸುಳ್ಯ ಬ್ಲಾಕ್‌ಗೆ ಸಚಿನ್ ರಾಜ್ ಶೆಟ್ಟಿ, ಕಡಬ ಬ್ಲಾಕ್‌ಗೆ ಮ್ಯಾಥ್ಯೂ ಟಿ.ಎಂ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷ ಲಾರೆನ್ಸ್ ಡಿಸೋಜ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News