ಉಡುಪಿ ಆಶ್ರಮದಲ್ಲಿ ರಾಹುಲ್ ಗಾಂಧಿ ಹುಟ್ಟುಹಬ್ಬ ಆಚರಣೆ
ಉಡುಪಿ, ಜೂ.20: ಉಡುಪಿ ಜಿಲ್ಲಾ ರಾಹುಲ್ ಗಾಂಧಿ ಬ್ರಿಗೇಡ್ ವತಿ ಯಿಂದ ರಾಹುಲ್ ಗಾಂಧಿ ಅವರ 51ನೆ ಹುಟ್ಟುಹಬ್ಬವನ್ನು ಶನಿವಾರ ಉಡುಪಿಯ ಮಮತೆಯ ತೋಟ್ಟಿಲು ಆಶ್ರಮದಲ್ಲಿ ಆಚರಿಸಲಾಯಿತು.
ಬ್ರಿಗೇಡ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಝಮೀರ್ ನೇತೃತ್ವದಲ್ಲಿ ಆಶ್ರಮದ ಮಕ್ಕಳಿಗೆ 25 ಕುರ್ಚಿ, ಅಕ್ಕಿ ಹಾಗೂ ಸಿಹಿ ತಿಂಡಿ ಹಂಚಿ ವಿಶೇಷ ರೀತಿಯಲ್ಲಿ ಮಕ್ಕಳ ಜೋತೆ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್, ನಗರಸಭೆ ಸದಸ್ಯೆ ಅಮೃತ ಕೃಷ್ಣಮೂರ್ತಿ ಆಚಾರ್ಯ, ಜಿಲ್ಲಾ ವಿಧ್ಯಾರ್ಥಿ ಸಂಘಟನೆ ಅಧ್ಯಕ್ಷ ಸೌರಬ್ ಬಲ್ಲ್ಲಾಳ್, ಕೆಪಿಸಿಸಿ ಸೋಷಿಯಲ್ ಮೀಡಿಯಾ ಜಿಲ್ಲಾ ಮಾಜಿ ಕೋ ಆರ್ಡಿನೇಟರ್ ಪ್ರಭಾಕರ ಆಚಾರ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಗುರು ಪ್ರಸಾದ್ ಶೆಟ್ಟಿ, ಡಿಕೆಶಿ ಅಭಿಮಾನಿ ಬಳಗದ ಉಪಾಧ್ಯಕ್ಷ ಮಹೇಶ್ ಸುವರ್ಣ ಮಲ್ಪೆ, ಗಣೇಶ್, ಮಸೋದ್, ಅಕ್ರಮ್, ಪ್ರಥಮ್ ಪೂಜಾರಿ, ಫಯಲ್, ಮುನ್ನ, ನದಿಮಾ, ನಿಯಾಜ್, ಕ್ರಿಷ್ಟನ್, ಮೂಫಿದ್, ಗಣೇಶ್ ಶೇರಿಗರ್, ಓಂಕರ್ ಸುನಿಲ್ ಉಪಸ್ಥಿತರಿದರು.