ರಾಹುಲ್ ಗಾಂಧಿ ಹುಟ್ಟುಹಬ್ಬ: ಹಣ್ಣುಹಂಪಲು ವಿತರಣೆ

Update: 2021-06-20 14:48 GMT

ಉಡುಪಿ, ಜೂ.20: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಜನ್ಮ ದಿನದ ಪ್ರಯುಕ್ತ ಜಿಲ್ಲೆಯ ಬಿ.ಆರ್.ಶೆಟ್ಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣು- ಹಂಪಲು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಮುಖಂಡ ರಾದ ಕಿಶನ್ ಹೆಗಡೆ ಕೊಳ್ಕೆಬೈಲು, ನಾಗೇಶ್ ಉದ್ಯಾವರ, ಯತೀಶ್ ಕರ್ಕೇರ, ರವಿರಾಜ್, ಶಬರೀಶ್ ಸುವರ್ಣ, ಪ್ರಣಂ, ಡಿಯೋನ್ ಕಲ್ಮಾಡಿ, ಲಕ್ಷ್ಮಣ್ ಪೂಜಾರಿ, ಸಾಯಿ ರಾಜ್, ಸುರೈಯ್ಯ ಅಂಜುಮ್, ನಟರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News