ಮಂಗಳೂರು: ರಿಕ್ಷಾ ಚಾಲಕರಿಗೆ ಕಿಟ್ ವಿತರಣೆ

Update: 2021-06-20 16:56 GMT

ಮಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಬಜಾಲ್ ಸುತ್ತಮುತ್ತಲ ಪರಿಸರದ ಆಯ್ದ 60 ರಿಕ್ಷಾ ಚಾಲಕರಿಗೆ ಪಕ್ಕಲಡ್ಕ ಯುವಕ ಮಂಡಲದ ಮಾಜಿ ಕಾರ್ಯದರ್ಶಿ, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಜೋಯ್ ಫೆರ್ನಾಂಡೀಸ್ ಸೌದಿ ಅರೇಬಿಯಾ ಇವರ ಸಹಕಾರದೊಂದಿಗೆ ಪಕ್ಕಲಡ್ಕ ಯುವಕ ಮಂಡಲದ ಭಗತ್ ಸಿಂಗ್ ಭವನದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.

ಸಂತ ಜೋಸೆಫ್ ಪ್ರೌಢಶಾಲೆ ಬಜಾಲ್ ಇದರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲಿನೆಟ್ ಸಿಕ್ವೇರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ಉದ್ಯಮಿ ಸದಾಶಿವ ದಾಸ್, ರಾಮಚಂದ್ರ ಆಳ್ವ, ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷರಾದ ದೀಪಕ್ ಬಜಾಲ್, ಕಾರ್ಯದರ್ಶಿ ಜಗದೀಶ್ ಬಜಾಲ್, ಮಾಜಿ ಕಾರ್ಯದರ್ಶಿ ಕಮಲಾಕ್ಷ ಶೆಟ್ಟಿ, ಹಿರಿಯ ಮುಖಂಡ  ಬಿ ನಾಗೇಶ್ ಶೆಟ್ಟಿ , ಸಂತೋಷ್ ಬಜಾಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ನೇತೃತ್ವವನ್ನು ಪಕ್ಕಲಡ್ಕ ಯುವಕ ಮಂಡಲದ ಸದಸ್ಯರಾದ ಧಿರಾಜ್, ಪ್ರಿತೇಶ್, ಉದಯ ಕುಂಟಲಗುಡ್ಡೆ, ನಾಗರಾಜ್ ಬಜಾಲ್, ಪ್ರಕಾಶ್ ಶೆಟ್ಟಿ, ವರಪ್ರಸಾದ್, ಪ್ರಶಾಂತ್ ಕುಡ್ತಡ್ಕ, ಕೃಷ್ಣ ಹಾಗು ಇತರರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News