ಜಪ್ಪು: ಕಾಂಗ್ರೆಸ್ ಹೆಲ್ಪ್ಲೈನ್ನಿಂದ ಪ್ರಿವೆಂಶನ್ ಕಿಟ್ ಹಸ್ತಾಂತರ
ಮಂಗಳೂರು, ಜೂ.22: ದ.ಕ ಜಿಲ್ಲಾ ಕಾಂಗ್ರೆಸ್ ಹೆಲ್ಪ್ಲೈನ್ ವತಿಯಿಂದ ಸಂಚಾಲಕ ಐವನ್ ಡಿಸೋಜ ಅವರ ನೇತೃತ್ವದಲ್ಲಿ ತುರ್ತು ಸಂದರ್ಭಗಳಲ್ಲಿ ರೋಗಿಗಳ ಆರೋಗ್ಯಕ್ಕೆ ಬಳಕೆ ಮಾಡಲು ಪ್ರಿವೆಂಶನ್ ಕಿಟ್, ವ್ಯಾಪರೈಸರ್ಗಳನ್ನು ಜಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
ವೈದ್ಯಾಧಿಕಾರಿ ವಿದ್ಯಾ ಅವರಿಗೆ ಕಿಟ್ ಹಸ್ತಾಂತರಿಸಿ ಮಾತನಾಡಿದ ಐವನ್ ಡಿಸೋಜ, ಕಿಟ್ಗಳನ್ನು ರೋಗಿಗಳ ಆರೈಕೆಗೆ ಉಪಯೋಗಿಸುವಂತೆ ವಿನಂತಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯ ನಿರ್ವಹಣೆಯನ್ನು ಶ್ಲಾಸಿದರು. ಕೊರೋನ ಹೊರತಾದ ಅನೇಕ ರೋಗಿಗಳಿಗೆ ಆಸ್ಪತ್ರೆಗೆ ಆಗಮಿಸಿದ ವೇಳೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಸಮಯ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ವಿವೇಕ್ರಾಜ್ ಪೂಜಾರಿ, ಎ.ಸಿ. ವಿನಯರಾಜ್, ವಿಕ್ಟೋರಿಯಾ, ವಿದ್ಯಾ, ಗೀತಾ ಅತ್ತಾವರ, ದೀಕ್ಷಿತ್ ಅತ್ತಾವರ, ವಿದ್ಯಾ, ಮೀನಾ ಟೆಲ್ಲಿಸ್, ತೆರೆಜಾ ಪಿಂಟೊ, ಮಹೇಶ್ ಕೋಡಿಕಲ್, ಆನಂದ್ ಸೋನ್ಸ್, ಪವಿತ್ರ, ಹಸನ್ ಳ್ನೀರ್, ಬಾಜಿಲ್ ಉಪಸ್ಥಿತರಿದ್ದರು.