ಕರಾವಳಿಯ ಸೌಹಾರ್ದ ಚಳುವಳಿಗಾರರಿಂದ ಸಿ.ಎನ್. ಶೆಟ್ಟಿಗೆ ನುಡಿನಮನ
ಮಂಗಳೂರು, ಜು. 23: ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ನಿಧನರಾದ ಕರ್ನಾಟಕ ಕೋಮುಸೌಹಾರ್ದ ವೇದಿಕೆಯ ದ.ಕ. ಜಿಲ್ಲಾಧ್ಯಕ್ಷರಾಗಿದ್ದ, ವಿಚಾರವಾದಿ ಸಿ.ಎನ್. ಶೆಟ್ಟಿ ಅವರಿಗೆ ನುಡಿನಮನ ಸಲ್ಲಿಸುವ ವಿಶೇಷ ಆನ್ಲೈನ್ ಕಾರ್ಯಕ್ರಮ ಮಂಗಳವಾರ ನಡೆಯಿತು.
ಉಡುಪಿಯ ಪ್ರೊ. ಕೆ. ಪಣಿರಾಜ್ ಮಾತನಾಡಿ, ಪ್ರಬಲ ಸಮುದಾಯದಿಂದ ಬಂದು ಕೋಮು ಸೌಹಾರ್ದದ ಚಳುವಳಿಗೆ ನಾಯಕತ್ವ ನೀಡಿದ್ದ ನೆಹರೂವಾದಿ ಸಿ.ಎನ್.ಶೆಟ್ಟಿಯವರ ವಿಚಾರ, ಬದುಕು, ಹೋರಾಟ, ಬರಹ, ಮುಗ್ದತೆ, ಹದಿಹರೆಯದಲ್ಲೂ ತೋರಿದ ಲವಲವಿಕೆ ಎಲ್ಲರಿಗೂ ಮಾದರಿ. ಅವರ ಆಶಯದ ಕನಸುಗಳನ್ನು ನನಸಾಗಿಸುವುದೇ ನಿಜವಾದ ನುಡಿನಮನ ಎಂದರು.
ಸಾಮಾಜಿಕ ಹೋರಾಟಗಾರ ಕೆ.ಎಲ್.ಅಶೋಕ್, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ, ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ, ಸಾಮಾಜಿಕ ಕಾರ್ಯಕರ್ತರಾದ ಬಿ. ಮುಹಮ್ಮದ್ ಕಕ್ಕಿಂಜೆ, ದಿನಕರ ಎಸ್. ಬೆಂಗ್ರೆ ನುಡಿನಮನ ಸಲ್ಲಿಸಿದರು.
ಗಾಯಕ ಬೆಂಗಳೂರಿನ ಚಿಂತನ್ ವಿಕಾಸ್ ಮತ್ತು ಪ್ರಾಧ್ಯಾಪಕ ಡಾ. ಶಶಿಕಾಂತ್ ಕೆ. ಹಾಡುಗಳ ಮೂಲಕ ನಮನ ಸಲ್ಲಿಸಿದರು. ಇಸ್ಮತ್ ಪಜೀರು ಸ್ವಾಗತಿಸಿದರು. ಉಮರ್ ಯು.ಎಚ್. ಕ್ರಾರ್ಯಕ್ರಮ ನಿರೂಪಿಸಿದರು.
ಕುಟುಂಬದ ಪ್ರತಿನಿಧಿಯಾಗಿ ಸಿ.ಎನ್. ಶೆಟ್ಟಿಯ ಅಳಿಯ ಸುರೇಶ್ ನಾಯಕ್ ಪಾಲ್ಗೊಂಡಿದ್ದರು. ಸುರೇಶ್ ಭಟ್ ಬಾಕ್ರಬೈಲು, ಶಿವಸುಂದರ್, ಡಾ. ಗಣನಾಥ ಶೆಟ್ಟಿ ಎಕ್ಕಾರು, ಪ್ರವೀಣ್ ಶೆಟ್ಟಿ, ಸಂಜೀವ ಬಾಲ್ಕೂರು, ರಾಘವೇಂದ್ರ ಕೆ., ಜೈರಾಜ್, ತೌಸೀಫ್ ಕೊಪ್ಪ, ಸುಧಾ ಹೆಗ್ಡೆ ಮತ್ತಿತರರು ಭಾಗವಹಿಸಿದ್ದರು.