ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವಿಟ್ಲ-ಪುತ್ತೂರು ವಲಯದಿಂದ ಕಿಟ್ ವಿತರಣೆ

Update: 2021-06-23 16:17 GMT

ಮಂಗಳೂರು, ಜೂ. 23 :  ಲಾಕ್ಡೌನ್ ಕಾರಣದಿಂದಾಗಿ, ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡು ಉದ್ಯೋಗಗಳಿಲ್ಲದೆ ಹಾಗೂ ನ್ಯೂಸ್ ಪೇಪರ್ ಸ್ಟಾಲ್, ಪಾನ್ ಸ್ಟಾಲ್ ಗಳಂತಹ ಸಣ್ಣ ಪುಟ್ಟ  ವ್ಯಾಪಾರಸ್ಥರಿಗೆ ಯಾವುದೇ ವಹಿವಾಟುಗಳಿಲ್ಲದೆ, ಆದಾಯದಲ್ಲಿ ತೀವ್ರ  ಕುಸಿತಗೊಂಡು, ಆರ್ಥಿಕ ಸಂತ್ರಸ್ತರಾದವರನ್ನು ಪರಿಗಣಿಸಿ ವಿಟ್ಲ ಮತ್ತು ಪುತ್ತೂರು ಪ್ರದೇಶದಲ್ಲಿನ ಕೆಲವೊಂದು ಆಯ್ದ ಕುಟುಂಬಗಳಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಲಯದ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಇತ್ತೀಚೆಗೆ ವಿತರಿಸಲಾಯಿತು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಲಯದ ಕಾರ್ಯದರ್ಶಿ ಇಸಾಕ್ ನೀರ್ಕಜೆಯವರು, ಎಫ್. ಐ. ಟಿ. ಯು. ರಾಜ್ಯಾಧ್ಯಕ್ಷ ಸುಲೈಮಾನ್ ಕಲ್ಲರ್ಪೆಯವರ ಉಪಸ್ಥಿತಿಯಲ್ಲಿ ಪುತ್ತೂರು  ಹಾಗೂ ವೆಲ್ಫೇರ್  ವಿಟ್ಲ ಘಟಕದ ಅಧ್ಯಕ್ಷ ಎಂ. ಎ. ರಹಿಮಾನ್ ಮತ್ತು ಡಬ್ಲ್ಯು.ಪಿ. ಐ. ದ. ಕ. ಜಿಲ್ಲಾ ಮಾಧ್ಯಮ ವಕ್ತಾರ ಅಬ್ದುಲ್ ಖಾದರ್ ಕುಕ್ಕಾಜೆ ಯವರಿಂದ ವಿಟ್ಲ ಪರಿಸರದಲ್ಲಿ ಅರ್ಹರಿಗೆ ಕಿಟ್ ವಿತರಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News