ಬೈಕಂಪಾಡಿ: ಕೂಲಿ ಕಾರ್ಮಿಕ ಆತ್ಮಹತ್ಯೆ

Update: 2021-06-27 12:17 GMT

ಮಂಗಳೂರು, ಜೂ.27: ನಗರ ಹೊರವಲಯದ ಬೈಕಂಪಾಡಿ ಸಮೀಪದ ಮೀನಕಳಿಯ ಎಂಬಲ್ಲಿ ಕೂಲಿ ಕಾರ್ಮಿಕನೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.

ಬಸಪ್ಪತಳವಾರ್ (36) ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕೆಲಸಕ್ಕೆ ಹೋಗದೆ ಕೆಲವು ಸಮಯದಿಂದ ಮನೆಯಲ್ಲೇ ಇದ್ದ ಮತ್ತು ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ.

ಜೂ.26ರ ರಾತ್ರಿ ಸುಮಾರು 11ಗಂಟೆಗೆ ಮನೆಯವರು ಊಟ ಮಾಡಿ ಮಲಗಿದ್ದು, ಮರುದಿನ ಎದ್ದು ನೋಡಿ ದಾಗ ಮನೆಯ ಹತ್ತಿರ ಮರವೊಂದಕ್ಕೆ ಬಸಪ್ಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಬಸಪ್ಪ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News