ಮಲ್ಪೆ: ಸೈಕಲ್‌ನಿಂದ ಬಿದ್ದು ಸವಾರ ಮೃತ್ಯು

Update: 2021-06-28 17:41 GMT

ಮಲ್ಪೆ, ಜೂ.28: ಮಳೆಯಿಂದ ಸೈಕಲ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಸವಾರರೊಬ್ಬರು ಮೃತಪಟ್ಟ ಘಟನೆ ಮೂಡುಬೆಟ್ಟು ಆಚಾರಿ ಕಟ್ಟೆ ಬಳಿ ನಡೆದಿದೆ.

ಮೃತರನ್ನು ಮಣಿಪಾಲ ಎಂಐಟಿ ಕಾಲೇಜಿನ ನಿವೃತ್ತ ಗುಮಾಸ್ತ ಮೋಹನ್ ದಾಸ ಕಾಮತ್(64) ಎಂದು ಗುರುತಿಸಲಾಗಿದೆ. ಇವರು ಜೂ.26ರಂದು ಸೈಕಲ್‌ನಲ್ಲಿ ವಿಪರೀತ ಮಳೆ ಬರುತ್ತಿದ್ದ ವೇಳೆ ಕೈಯಲ್ಲಿ ಕೊಡೆ ಹಿಡಿದುಕೊಂಡು ಹೋಗುತ್ತಿದ್ದರು. ಇದರಿಂದ ನಿಯಂತ್ರಣ ತಪ್ಪಿ ಇವರು ಸೈಕಲ್ ಮೇತ ರಸ್ತೆಗೆ ಬಿದ್ದರೆನ್ನಲಾಗಿದೆ.

ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಜೂ.27ರಂದು ಮಧ್ಯಾಹ್ನ 3ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News