ದ.ಕ. ಜಿಲ್ಲೆಯಲ್ಲಿ ಮಳೆ ಬದಲು ಬಿಸಿಲ ವಾತಾವರಣ

Update: 2021-06-29 16:49 GMT

ಮಂಗಳೂರು, ಜೂ.29: ದ.ಕ. ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಬಿಸಿಲ ವಾತಾವರಣವಿತ್ತು. ಆದರೆ ಮುಂಜಾನೆಯಿಂದ ರಾತ್ರಿಯವರೆಗೆ ಮಳೆ ಸುರಿಯಲಿಲ್ಲ. ಆರಂಭದಲ್ಲಿ ಭಾರೀ ಬಿರುಸು ಪಡೆದಿದ್ದ ಮುಂಗಾರು ಮಳೆಯು ಕಳೆದೊಂದು ವಾರದಿಂದ ದುರ್ಬಲವಾಗಿಯೇ ಸಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದ ಹಲವು ಕಡೆ ಮಂಗಳವಾರ ಮುಂಜಾನೆಯ ವೇಳೆ ದಟ್ಟ ಮಂಜು ಕವಿದ ವಾತಾವರಣವಿತ್ತು. ಬಳಿಕ ಬಿಸಿಲ ವಾತಾವರಣ ಕಂಡು ಬಂದಿದೆ.

ಮಂಗಳವಾರದ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಸದ್ಯ ಮೋಡದ ಚಲನೆ ಕಂಡು ಬರುತ್ತಿಲ್ಲ. ಇನ್ನೂ ನಾಲ್ಕು ದಿನ ಮಳೆ ಸಾಧ್ಯತೆ ಕಡಿಮೆ ಇದ್ದು, ಶುಭ್ರ ಆಕಾಶ ಗೋಚರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News