ಸೌದಿ ಅರೇಬಿಯಾ : ಮಂಗಳೂರು ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾಗಿ ಶಂಸುದ್ದೀನ್ ಬಂಟ್ವಾಳ

Update: 2021-07-02 17:19 GMT
ಶಂಸುದ್ದೀನ್-ತೌಸೀಫ್

ರಿಯಾದ್ :  ಜಿದ್ದಾದಲ್ಲಿ ನೂತನವಾಗಿ ರೂಪುಗೊಂಡ 'ಮಂಗಳೂರು ಕ್ರಿಕೆಟ್ ಅಸೋಸಿಯೇಶನ್  ಇದರ ನೂತನ ಅಧ್ಯಕ್ಷರಾಗಿ ಶಂಸುದ್ದೀನ್ ಬಂಟ್ವಾಳ ಆಯ್ಕೆಯಾಗಿದ್ದಾರೆ.

ಜಿದ್ದಾ ಪರಿಸರದಲ್ಲಿ ವಾಸಿಸುವ ಅನಿವಾಸಿ ಕನ್ನಡಿಗರಾದ ಝೈನುದ್ದೀನ್ ಮುನ್ನೂರ್, ಅಬ್ದುಲ್ ಸಲೀಂ ಘಣಿ, ಮೊಹಮ್ಮದ್ ಅಲೀ ಕುತ್ತಾರ್, ಮೊಹಮ್ಮದ್ ಸಾದಿಕ್, ಫಯಾಝ್ ಉಡುಪಿ, ಇಸ್ಮಾಯಿಲ್ ಅಬ್ದುಲ್ ಖಾದರ್, ಶಂಶುದ್ದೀನ್ ಉಚ್ಚಿಲ, ಅಲೋಕ್ ಪ್ರಭು ಮತ್ತು ಆದಿಲ್ ಮಲ್ಪೆ ಇವರ ನೇತೃತ್ವದಲ್ಲಿ  ಸಮಿತಿ ರೂಪೀಕರಿಸಲಾಯಿತು.

ಸಮಿತಿ ಆಡಳಿತ ಮಂಡಳಿಯ  ಉಪಾದ್ಯಕ್ಷರಾಗಿ ರಮೀಝ್ ಮುಲ್ಕಿ, ಕಾರ್ಯದರ್ಶಿಯಾಗಿ ತೌಸೀಫ್ ಇಬ್ರಾಹಿಂ ಪಕ್ಕಲಡ್ಕ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಅಡ್ಡೂರ್ ಮತ್ತು ಖಜಾಂಚಿಯಾಗಿ ಇಫ್ರಾಝ್ ಮೂಡಬಿದ್ರೆ ಆಯ್ಕೆಯಾಗಿದ್ದಾರೆ.

ಮಂಗಳೂರು ಮೂಲದ ಕ್ರಿಕೆಟ್ ತಂಡಗಳಾದ ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು, ಎ ಟಿ ಎಸ್ ಕ್ರಿಕೆಟ್ ಕ್ಲಬ್, ಮಂಗಳೂರು ಕ್ರಿಕೆಟ್ ಕ್ಲಬ್, ಸ್ಟಾರ್ ವಾರಿಯರ್ಸ್, ರಿಲಯನ್ಸ್ ಕ್ರಿಕೆಟರ್ಸ್, ಫೈವ್ ಸ್ಟಾರ್ ಅಡ್ಡೂರು, ಗ್ಲಾಡಿಯೇಟರ್ಸ್ ಮತ್ತು  ಅಲ್ ಅಮ್ರಿ ಕ್ರಿಕೆಟ್ ಕ್ಲಬ್, ತಮ್ಮ ತಂಡಗಳ ಹೆಸರುಗಳನ್ನು ಮಂಗಳೂರು ಕ್ರಿಕೆಟ್ ಅಸೋಸಿಯೇಶನ್ ಅಡಿಯಲ್ಲಿ ನೋಂದಾಯಿಸಲಾಯಿತು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News