ಭಟ್ಕಳ ನ್ಯಾಯಾಲಯದ ಯಾವುದೇ ಕಡತ ಸುಟ್ಟು ಹೋಗಿಲ್ಲ : ಶಿವಾಜಿ ಅನಂತ ನಾಲವಡಿ

Update: 2021-07-03 17:53 GMT

ಕಾರವಾರ: ಭಟ್ಕಳ ನ್ಯಾಯಾಲಯದ ಕಟ್ಟಡದಲ್ಲಿ ಶುಕ್ರವಾರ ನಸುಕಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಅವಘಡದಲ್ಲಿ ಭಾಗಶಃ ಕಟ್ಟಡ, ಕಂಪ್ಯೂಟರ್ ಗಳು ಮತ್ತು ಕೆಲವು ವಿದ್ಯುತ್ ಉಪಕರಣಗಳು ಮಾತ್ರ ಸುಟ್ಟು ಹೋಗಿವೆ. ನ್ಯಾಯಾಲಯದ ಯಾವುದೇ ಕಡತ ಸುಟ್ಟು ಹೋಗಿಲ್ಲ ಎಂದು ಪ್ರಭಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಾಜಿ ಅನಂತ ನಾಲವಡಿ ತಿಳಿಸಿದ್ದಾರೆ.

ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳು ಸುಟ್ಟು ಹೋಗಿರುತ್ತವೆ ಎಂದು  ಕೆಲವೊಂದು ಪತ್ರಿಕೆಗಳಲ್ಲಿ ವರದಿ ಯಾಗಿದ್ದು, ಈ ಅವಘಡದಲ್ಲಿ ಯಾವುದೇ ಪ್ರಕರಣದ ಕಡತಗಳಾಗಲೀ ಅಥವಾ ಕಚೇರಿಗೆ ಸಂಬಂಧಿಸಿದ ಕಡತಗಳು ಸುಟ್ಟು ಹೋಗಿಲ್ಲ ಎಂದು ಶಿವಾಜಿ ಅನಂತ ನಾಲವಡಿ ಅವರು ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News