ಉಡುಪಿ: ಡಿಸಿ ಕಚೇರಿ ರಸ್ತೆಗೆ ವಿ.ಎಸ್.ಆಚಾರ್ಯ ನಾಮಕರಣ
Update: 2021-07-04 20:50 IST
ಉಡುಪಿ, ಜು.4: ಮಣಿಪಾಲ ಸಿಂಡಿಕೇಟ್ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗಿನ ರಸ್ತೆಯನ್ನು ಡಾ.ವಿ.ಎಸ್.ಆಚಾರ್ಯ ರಸ್ತೆ ಎಂಬುದಾಗಿ ಉಡುಪಿ ನಗರಸಭೆ ನಾಮಕರಣ ಮಾಡಿದೆ.
ಈ ರಸ್ತೆಯನ್ನು ಡಾ.ವಿ.ಎಸ್.ಆಚಾರ್ಯ ಅವರ ಜನ್ಮದಿನದ ಪ್ರಯುಕ್ತ ಜು.6 ರಂದು ಬೆಳಗ್ಗೆ 8.30ಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದಾರೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.