ಮಂಜೇಶ್ವರ : ಅಭಿವೃದ್ಧಿ ಯೋಜನೆಗಳಿಗೆ ಹಣ ಒದಗಿಸಲು ರಾಜ್ಯ ಹಣಕಾಸು ಸಚಿವರಿಗೆ ಉದುಮ ಶಾಸಕ ಮನವಿ

Update: 2021-07-10 12:37 GMT

ಮಂಜೇಶ್ವರ : ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಹಣ ಒದಗಿಸಲು ರಾಜ್ಯ ಹಣಕಾಸು ಸಚಿವರಾದ ಕೆ.ಎನ್. ಬಾಲಗೋಪಲ ಅವರಿಗೆ ಉದುಮ ಶಾಸಕ ಸಿಎಚ್ ಕುಞಾಂಬು ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿರುವ ಮಂಜೇಶ್ವರ ಸಾಮುದಾಯಿಕ ಆರೋಗ್ಯ ಕೇಂದ್ರ (ಸಿ.ಎಚ್.ಸಿ), ಕುಂಬಳೆ ಸಿ.ಎಚ್.ಸಿ, ಮಂಜೇಶ್ವರ ತಾಲೂಕು ಅಸ್ಪತ್ರೆಗೆ (ಮಂಗಲ್ಲಾಡಿ) ಕಟ್ಟಡ ಹಾಗೂ ಸಿಬ್ಬ೦ದಿ ನೇಮಕ, ಕೂಳೂರು-ಪತ್ತಾ ವಾಡಿ ರಸ್ತೆ ನಿರ್ಮಾಣ, ದರ್ಬೆ - ಕೊಮಂಗಳ ಸೇತುವೆ, ಶಿರಿಯಾ ಅಣೆಕಟ್ಟು, ಧರ್ಮತಡಕ ಸೇತುವೆ ಮತ್ತು ಕಾಸರಗೋಡು, ಮoಜೇಶ್ವರ ಪ್ರದೇಶದಲ್ಲಿ 'ಕುಟುಂಬ ಶ್ರೀ ಚಟುವಟಿಕೆ' ಬಲಪಡಿಸಲು ಯೋಜನೆ, ಪೈವಳಿಕೆ ಪೊಲೀಸ್ ಕೇಂದ್ರ, ಮಂಜೇಶ್ವರ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಕುಡಿನೀರು , ಪೆಟ್ರೋಲ್ ಪಂಪ್ , ನಾಡದೋಣಿಗಳಿಗೆ ನಿಲ್ಲುವುದಕ್ಕೆ ಪ್ರತ್ಯೇಕ ದಕ್ಕೆ ನಿರ್ಮಾಣ, ಪೂಯ್ಕೆ, ಕಂಡ, ಬಂಗ್ರಮಂಜೇಶ್ವರ, ಕಾಡಿಯಾರ್ ಕುಡಿನೀರು ಯೋಜನೆಗಳಿಗೆ ಅಗತ್ಯವಾದ ಹಣ ಒದಗಿಸಲು ರಾಜ್ಯ ಹಣಕಾಸು ಸಚಿವರಾದ ಕೆ.ಎನ್ ಬಾಲಗೋಪಲ ಅವರಿಗೆ ಉದುಮ ಶಾಸಕ ಸಿಎಚ್ ಕುಞಾಂಬು ಹಾಗೂ ಕೆ.ಆರ್ ಜಯಾನಂದ ಮನವಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News