ಎರಡು ಗುಂಪುಗಳ ಮಧ್ಯೆ ಹೊಡೆದಾಟ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

Update: 2021-07-15 17:07 GMT

ಪಡುಬಿದ್ರಿ : ಪಲಿಮಾರು ಹೋಟೆಲ್ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷನೆಗೆ ಸಂಬಂಧಿಸಿ ಕರ್ನಿರೆಯ ಸಂಪತ್ ಕುಮಾರ್ ಶೆಟ್ಟಿ ತಂಡದ ವಿರುದ್ಧ ಪ್ರತಿ ದೂರು ನೀಡಿದ್ದಾರೆ.

ಕ್ರಿಕೆಟ್ ಪಂದ್ಯಾಟದ ವೇಳೆ ನಡೆದ ವಾಗ್ವಾದಕ್ಕೆ ಪ್ರತಿಯಾಗಿ ಮಂಗಳವಾರ ರಾತ್ರಿ ಬಗ್ಗೆ ರಾಜಿ ಮಾಡಿಕೊಳ್ಳುವ ಬಗ್ಗೆ ಪಲಿಮಾರಿಗೆ ಬರ ಹೇಳಿ ತಂಡ ಕಟ್ಟಿಕೊಂಡು ಚೂರಿ ಹಾಗೂ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾಗಿ ಪಡುಬಿದ್ರಿ ಠಾಣೆಗೆ ದೂರು ನೀಡಲಾಗಿದೆ.

ದೂರಿನಲ್ಲಿ ಪಡುಬಿದ್ರಿಯ ಜಿತೇಂದ್ರ, ಸೂರಜ್, ತನುಜ್, ಕಿರಣ್ ಭಟ್, ಸಚಿನ್ ಶೆಟ್ಟಿ, ಶರತ್ ಶೆಟ್ಟಿ, ಕೃಷ್ಣ ಮತ್ತಿತರರು ಎಂದು ತಿಳಿಸಲಾಗಿದ್ದು, ಆರೋಪಿತರು ತನಗೆ ಹಾಗೂ ತನ್ನ ಸಹೋದರ ರಂಜಿತ್ ಶೆಟ್ಟಿಯವರ ಹೊಟ್ಟೆಗೆ ಚೂರಿಯಿಂದ ತಿವಿದ ಕಾರಣ ತೀವ್ರ ಗಾಯಗೊಂಡು ಮಂಗಳೂರು ಖಾಸಗಿ ಅಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಲಾಗಿದೆ. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದೆ.

ನಾಲ್ವರು ಆರೋಪಿಗಳ ಬಂಧನ

ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕಿರಣ್ ವೈ, ಎಸ್. ಎಲ್ಲೂರು, ತನುಜ್ ಎಂ. ಕರ್ಕೇರ ಕಾಡಿಪಟ್ಣ,, ಸಚಿನ್ ಶೆಟ್ಟಿ ಪಲಿಮಾರು ಹಾಗೂ ಕೃಷ್ಣ ಸಾಲ್ಯಾನ್ ಹೆಜಮಾಡಿ ಅವರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದು ಉಡುಪಿಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ಜು. 28ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News