ಯುವಕ ಆತ್ಮಹತ್ಯೆ

Update: 2021-07-17 15:38 GMT

ಬೈಂದೂರು, ಜು.17: ಪ್ರೀತಿಯ ವಿಚಾರದಲ್ಲಿ ಮನನೊಂದ ಯುವಕ ನೋರ್ವ ಆತ್ಮಹತ್ಯೆ ಮಾಡಿಕೊಂದ್ದಾನೆ ಎನ್ನಲಾದ ಘಟನೆ ಶಿರೂರು ಗ್ರಾಮದ ದಾಸನಾಡಿ ಎಂಬಲ್ಲಿ ಜು.16ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ದಾಸವಾಡಿಯ ರಜನಿ ಗಾಣಿಗ ಎಂಬವರ ಮಗ ಅಭಿಷೇಕ್ (20) ಎಂದು ಗುರುತಿಸಲಾಗಿದೆ. ಇವರು ಕೋಟೇಶ್ವರ ವರದರಾಜ ಕಾಲೇಜಿ ನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಕಲಿಯುತ್ತಿದ್ದು, ಬೈಂದೂರಿನ ಒಂದು ಹುಡುಗಿ ಯನ್ನು ಪ್ರೀತಿಸುತ್ತಿದ್ದನು.

 ಈ ವಿಚಾರ ತಿಳಿದು ಹುಡುಗಿಯ ಮಾವ ಇವರ ಮನೆಗೆ ಬಂದು ಹುಡುಗಿ ಯನ್ನು ಪ್ರೀತಿಸದಂತೆ ಬುದ್ದಿ ಮಾತು ಹೇಳಿ ಹೋಗಿದ್ದರು. ಇದೇ ವಿಚಾರದಲ್ಲಿ ಮನನೊಂದ ಅಭಿಷೇಕ್ ಮನೆಯ ರೂಮಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News