ಮಗುವಿಗೆ ಜನ್ಮ ನೀಡಿ ಬಾಣಂತಿ ಮೃತ್ಯು

Update: 2021-07-17 15:40 GMT

ಗಂಗೊಳ್ಳಿ, ಜು.17: ಹೆರಿಗೆಯ ಬಳಿಕ ಬಾಣಂತಿಯೊಬ್ಬರು ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಮರವಂತೆ ಫಿಶರೀಸ್ ಕಾಲೋನಿಯ ನಾಗೇಶ ಖಾರ್ವಿ ಎಂಬವರ ಪತ್ನಿ ಲಕ್ಷ್ಮೀ(29) ಎಂದು ಗುರುತಿಸಲಾಗಿದೆ. ಇವರು 2ನೇ ಬಾರಿ ಗರ್ಭಿಣಿ ಯಾಗಿದ್ದು 15 ದಿನಗಳಿಂದ ಕುಂದಾಪುರದ ಮದ್ದುಗುಡ್ಡೆಯಲ್ಲಿ ಅವರ ಅಕ್ಕನ ಮನೆಯಲ್ಲಿ ವಾಸವಾಗಿದ್ದರು. ಜು.15ರಂದು ಇವರಿಗೆ ಹೆರಿಗೆ ನೋವು ಪ್ರಾರಂಭ ವಾಗಿದ್ದು ಅವರನ್ನು ಕೋಟ ಸಮುದಾಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

 ಜು.16ರಂದು ಇವರಿಗೆ ವೈದ್ಯರು ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿ ಸಿದ್ದು, ನಂತರ ಜು.17ರಂದು ಬೆಳಗಿನ ಜಾವ ಇವರಿಗೆ ಲೋ ಬಿ.ಪಿ ಮತ್ತು ಪಿಡ್ಸ್ ಬಂದಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇವರು ಬೆಳಗ್ಗೆ 9.15ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News