ಆರೋಗ್ಯದ ಬಗ್ಗೆ ಜಾಗೃತಿ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಖಂಡಿಸಿ ಕೇರಳ-ಕಾಶ್ಮೀರ ಕಾಲ್ನಡಿಗೆ ಯಾತ್ರೆ

Update: 2021-07-17 17:11 GMT

ಪಡುಬಿದ್ರಿ: ಕೇರಳದಿಂದ ಲಡಾಖ್ ವರೆಗೆ ನಾಲ್ವರು ಯುವಕರು ಬೇರೆ ಬೇರೆಯಾಗಿ ಕೇರಳದಿಂದ ಕಾಶ್ಮೀರದವೆಗೆ ಕಾಲ್ನಡಿಗೆಯಾತ್ರೆ ಹಮ್ಮಿ ಕೊಂಡಿದ್ದು, ಶುಕ್ರವಾರ ಉಡುಪಿ ಜಿಲ್ಲೆಯ ಹೆಜಮಾಡಿಗೆ ತಲುಪಿದ್ದು, ಶನಿವಾರ ಬೆಳಗ್ಗೆ ಹೆಜಮಾಡಿಯಿಂದ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ.

ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ನಡಿಗೆಯಿಂದ ಆರೋಗ್ಯದ ಕುರಿತು ಸಮಾಜಕ್ಕೆ ಸಂದೇಶ ನೀಡಲೆಂದು ತ್ರಿಶೂರಿನ ವಾಸೀಮ್ ಆಲಿ, ಮಲಪ್ಪುರಂನ ಸಿಹಾಬ್ ಮಲಪ್ಪುರಂ, ತ್ರಿಶೂರಿನ ಅರುಣ್, ಎರ್ನಾಕುಲಂನ ಗಫ್ಫಾರ್ ಕಾಲ್ನಡಿಗೆ ಯಾತ್ರೆಯನ್ನು ಆರಂಭಿಸಿದ್ದಾರೆ. ಒಟ್ಟು 3500 ಕಿಮೀ ಕ್ರಮಿಸಲಿದ್ದು, ಕೇರಳದಿಂದ ಆರಂಭಗೊಂಡ ಕಾಲ್ನಡಿಗೆ ಯಾತ್ರೆಯು  ಕರ್ನಾಟಕ, ಗೋವಾ, ಮಹರಾಷ್ಟ್ರ, ರಾಜಸ್ಥಾನ, ಹರಿ ಯಾಣ, ಪಂಜಾಬ್ ಮೂಲಕ ಕಾಶ್ಮೀರಕ್ಕೆ ತಲುಪಿಲಿದೆ.

ಪ್ರತಿ ದಿನ 35 ಕಿಮೀ ಕ್ರಮಿಸಲಿದ್ದು, ಬಳಿಕ ಅಲ್ಲಿ ಸುರಕ್ಷಿತ ಪ್ರದೇಶದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕೇರಳ ಮತ್ತು ಕರ್ನಾಟಕ ಪೊಲೀಸರು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾತ್ರಿ ವೇಳೆ ಪೆಟ್ರೋಲ್ ಬಂಕ್ ಅಥವಾ ಸುರಕ್ಷಿತ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದಾಗಿ ವಸೀಂ ಆಲಿ ತಿಳಿಸಿದ್ದಾರೆ.

ಯಾತ್ರೆಯಲ್ಲಿ ಬೇಕಾಗುವ ಅಗತ್ಯ ವಸ್ತುಗಳನ್ನು ಇರಿಸಿಕೊಂಡಿದ್ದು, ಅಲ್ಲಲ್ಲಿ ಪೊಲೀಸರು ಮತ್ತು ಸ್ಥಳೀಯರ ಸಹಾಯವನ್ನು ಪಡೆದು ಮುಂದೆ ಸಾಗು ತ್ತಾರೆ. ಲಡಾಖ್ ತಲುಪಿದ ಮೇಲೆ ವಿಮಾನ ಅಥವಾ ರೈಲು ಯಾತ್ರೆ ಮೂಲಕ ಕೇರಳಕ್ಕೆ ಹಿಂತಿರುಗಿ ಬರುವುದಾಗಿ ಅವರು ತಿಳಿಸಿದ್ದಾರೆ.

ಕಾಲ್ನಡಿಗೆಯ ಮೂಲಕ ತಲುಪುವಿದರಿಂದ ಪರಿಸರವನ್ನು ಉಳಿಸಬಹುದು. ಆರೋಗ್ಯವೂ ಉತ್ತಮವಾಗುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿ ವಾಸೀಂ ಆಲಿ ಹೇಳುತ್ತಾರೆ.

ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತಿದ್ದು, ಇದಕ್ಕೆ ಕಡಿವಾಣ ಆಗಬೇಕಾಗಿದೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಶೃತಿ ಎನ್ನುವ ಮಹಿಳೆಯ ಅನುಮಾನಾಸ್ಪದ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಕುಟುಂಬಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅರುಣ್ ಆಗ್ರಹಿಸಿದ್ದಾರೆ.

ಬೇರೆ ಬೇರೆ ಹೊರಟು ಒಂದಾದರು: ಗುರುತು ಪರಿಚಯ ಇಲ್ಲದ ಈ ನಾಲ್ಬರು ಪ್ರತ್ಯೇಕವಾಗಿಯೇ ಯಾತ್ರೆ ಆರಂಭಿಸಿದ್ದು, ದಾರಿ ಮಧ್ಯೆ ಒಂದಾ ದರು. ಮಹಿಳೆಯರ ಮೇಲೆ ಆಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ಧ ವೆಲ್ಡಿಂಗ್ ಕೆಲಸ ಮಾಡುತಿದ್ದ ಅರುಣ್ ನ್ಯಾಯಕೋರಿ ಜುಲೈ 1ರಂದು ಕೇರಳದಿಂದ ಲಡಾಖ್ ವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದರು. ಆರೋಗ್ಯ ಸಂರಕ್ಷಣೆ ಕುರಿತು ಸಮಾಜಕ್ಕೆ ಸಂದೇಶವಾಗಿ ವಾಸೀಂ ಆಲಿ ಸೌದಿಯಲ್ಲಿ ಸೌದಿ ಏರ್‍ಲೈನ್ಸ್ ಉದ್ಯೋಗಿಯಾಗಿದ್ದು, ಕಳೆದ ವರ್ಷ ಉಂಟಾದ ಲಾಕ್‍ಡೌನ್ ಬಳಿಕ ಉದ್ಯೋಗ ತೊರೆದು ಊರಿನಲ್ಲಿದ್ದ ತ್ರಿಶೂರ್‍ನ ವಸೀಂ ಅಲಿ ಹಾಗು ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಎರ್ನಾಕುಲಂನ ಗಫ್ಪಾರ್ ಮತ್ತು ಸೆಕೆಂಡ್ ಪ್ಲಸ್ ಮುಗಿಸಿದ ಮಲಪ್ಪುರಂನ ಶಿಯಾಬ್ ಕಾಲ್ನಡಿಗೆ ಯಾತ್ರೆ ಹಮ್ಮಿಂಡಿದ್ದರು. ಈ ನಾಲ್ವರು ಗುರುವಾಯೂರಿನ ದಾರಿ ಮಧ್ಯೆ ಒಂದುಗೂಡಿ ಪರಸ್ಪರ ಪರಚಯಿಸಿಕೊಂಡು ತಮ್ಮ ಕಾಲ್ನಡಿಗೆ ಯಾತ್ರೆಯನ್ನು ಮುಂದುವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News